Advertisement

ಹಾಸನ ಟಿಕೆಟ್‌ ವಿಚಾರದಲ್ಲಿ ಗೊಂದಲ ಸೃಷ್ಟಿ : ಎಚ್‌ಡಿಕೆ

12:01 AM Feb 27, 2023 | Team Udayavani |

ಚಿಕ್ಕಮಗಳೂರು: ಹಾಸನ ಕ್ಷೇತ್ರ ಟಿಕೆಟ್‌ ವಿಚಾರದಲ್ಲಿ ಉಂಟಾಗಿರುವ ಗೊಂದಲದಿಂದ ಬಿಜೆಪಿ ಲಾಭ ಪಡೆದುಕೊಳ್ಳಲು ಮುಂದಾಗಿದೆ. ಇದರಿಂದ ಜೆಡಿಎಸ್‌ಗೆ ಆಘಾತವಾಗಲೂಬಹುದು.

Advertisement

ಈ ವಿಚಾರದ ಬಗ್ಗೆ ಚರ್ಚಿಸಿ ಕಾರ್ಯಕರ್ತರ ಅಭಿಪ್ರಾಯ ಕೇಳಲೇಬೇಕು. ನನ್ನಲ್ಲಿ ಯಾವುದೇ ಗೊಂದಲವಿಲ್ಲ. ಕೆಲವರು ಗೊಂದಲ ಸೃಷ್ಟಿಸಿದ್ದಾರೆಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಕೊಪ್ಪ ತಾಲೂಕು ಹರಂದೂರು ಗ್ರಾಮದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಾಸನ ಕ್ಷೇತ್ರ ಟಿಕೆಟ್‌ ಗೊಂದಲ ನಿವಾರಣೆ ಮಾಡಿ ಜನರಲ್ಲಿರುವ ತಪ್ಪು ಅಭಿಪ್ರಾಯ ದೂರ ಮಾಡಲು ಸಮಾನಮನಸ್ಕ ಮುಖಂಡರು, ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಪಕ್ಷದ ವರಿಷ್ಠರು ಸಭೆಯನ್ನು ರದ್ದು ಮಾಡಿರುವ ಮಾಹಿತಿ ಸಿಕ್ಕಿದೆ ಎಂದರು.

ಹಾಸನದಲ್ಲಿ ಭವಾನಿಯೇ ಅಭ್ಯರ್ಥಿ ಎಂದು ಅಲ್ಲಿಯ ಜೆಡಿಎಸ್‌ ಮುಖಂಡ ಕರೀ ಗೌಡರು ಹೇಳಿದ್ದಾರೆ. ಆ ವಿಚಾರದ ಬಗ್ಗೆ ಚರ್ಚೆ ಮಾಡುವುದಿಲ್ಲ. ಕರೀಗೌಡರು ಯಾವ ಉದ್ದೇಶದಿಂದ ಹಾಗೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಅಭ್ಯರ್ಥಿ ಯಾರಾಗಬೇಕೆಂಬುದನ್ನು ಕಾರ್ಯಕರ್ತರು ಹೇಳಬೇಕು. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಭೆ ಕರೆದು ಚರ್ಚಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next