Advertisement

ತುರ್ತು ವಿಧಾನಸಭೆ ಅಧಿವೇಶನ ಕರೆಯಿರಿ

08:53 PM Jun 20, 2021 | Team Udayavani |

ಹಾಸನ: ಕೊರೊನಾ 2ನೇ ಅಲೆ ನಿರ್ವಹಣೆಯಲ್ಲಿಮಾಡಿರುವ ವೆಚ್ಚ, 3ನೇ ಅಲೆ ಸಿದ್ಧತೆ ಬಗ್ಗೆ ಚರ್ಚೆಗೆವಿಧಾನಸಭಾ ಅಧಿವೇಶನ ಕರೆಯಬೇಕು ಎಂದುವಿಧಾನಸಭೆ ಸ್ಪೀಕರ್‌ ಮತ್ತು ಮುಖ್ಯಮಂತ್ರಿ ಅವರನ್ನುಜೆಡಿಎಸ್‌ ಮುಖಂಡ,ಮಾಜಿಸಚಿವಎಚ್‌.ಡಿ. ರೇವಣ್ಣ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು, ಮುಖ್ಯಮಂತ್ರಿ ಘೋಷಿಸಿರುವ ಪರಿಹಾರದ ಪ್ಯಾಕೇಜ್‌ಫ‌ಲಾನುಭವಿಗಳಿಗೆ ಇನ್ನೂ ತಲಪಿಲ್ಲ. ಕೊರೊನಾನಿರ್ವಹಣೆಗೆ ಗ್ರಾಪಂಗಳಿಗೆ 50 ಸಾವಿರ ರೂ.ಬಿಡುಗಡೆಮಾಡಿರುವುದಾಗಿ ಸಿಎಂ ಘೋಷಿಸಿದ್ದರೂ ಹಣ ಇದುವರೆಗೂ ತಲುಪಿಲ್ಲ. ಸರ್ಕಾರದಲ್ಲಿ ಹಣ ಇಲ್ಲದಿದ್ದರೂಸಿಎಂ ಜನರ ಕಣ್ಣೊರೆಸಲು ಪರಿಹಾರದ ಪ್ಯಾಕೇಜ್‌ಘೋಷಣೆ ಮಾಡಿದ್ದಾರೆ. ಸರ್ಕಾರದ ಆರ್ಥಿಕ ಸ್ಥಿತಿಗತಿಬಗ್ಗೆ ಜನರಿಗೆ ತಿಳಿಯಬೇಕಾಗಿದೆ.

ತುರ್ತಾಗಿ ವಿಧಾನಸಭೆ ಅಧಿವೇಶನ ಕರೆಯಬೇಕು. ವಿಧಾನಸಭೆಯವಿವಿಧ ವಿಷಯ ಸಮಿತಿಗಳ ಸಭೆ ನಡೆಸಲು ಸ್ಪೀಕರ್‌ಸೂಚನೆ ನೀಡಬೇಕು ಎಂದರು.

ಕೊರೊನಾ 2ನೇ ಅಲೆ ಎದುರಿಸಲು ಸರ್ಕಾರಪೂರ್ವ ಸಿದ್ಧತೆ ಮಾಡಿಕೊಳ್ಳದ ಪರಿಣಾಮ ಸಾವಿರಾರುಜನ ಬಲಿಯಾದರು. 3ನೇ ಅಲೆ ಎದುರಾಗುವುದರೊಳಗೆ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಈನಿಟ್ಟಿನಲ್ಲಿ ವಿಧಾನಸಭೆ ಅಧಿವೇಶನ ಕರೆದು ಶಾಸಕರಸಲಹೆ ಪಡೆಯಲಿ ಎಂದೂ ಆಗ್ರಹಿಸಿದರು.

ದೂರುಗಳಿಗೆಲ್ಲಾ ಹೆದರಲ್ಲ: ಐಎಂಎ ದೌರ್ಜನ್ಯ ತಡೆಸಮಿತಿ ಅಧ್ಯಕ್ಷ ಪುತ್ತೂರಿನ ವೈದ್ಯ ಡಾ.ಗಣೇಶ್‌ ಪ್ರಸಾದ್‌ಮುದ್ರಜೆ ಎಂಬವರು ಪುತ್ತೂರು ಠಾಣೆಯಲ್ಲಿ ತಮ್ಮವಿರುದ್ಧ ದೂರು ದಾಖಲಿಸಿರುವ ಸಂಬಂಧಪ್ರತಿಕ್ರಿಯಿಸಿ, ಖಾಸಗಿ ಆಸ್ಪತ್ರೆಗಳ ವಸೂಲಿ, ಸುಲಿಗೆಮಾಡುತ್ತಿರುವುದನ್ನು ಜಿಲ್ಲಾಡಳಿತ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನಾನೇ ಜನರ ಕಳುಹಿಸಿ ಹೊಡೆಸ್ತೀನಿ ಎಂದು ಎಚ್ಚರಿಕೆ ನೀಡಿದ್ದೆ. ನಾನು ಹೇಳಿದ್ದುಹಾಸನದ ಒಂದೆರಡು ಆಸ್ಪತ್ರೆಗಳ ವಿರುದ್ಧವೇ ಹೊರತು ಎಲ್ಲ ಖಾಸಗಿ ಆಸ್ಪತ್ರೆಗಳ ವಿರುದ್ಧವಲ್ಲ. ದೂರು ದಾಖಲುಮಾಡುವುದಿದ್ದರೆ ಹಾಸನದಲ್ಲಿ ಇಲ್ಲಿನ ವೈದ್ಯರ ಸಂಘದಮೂಲಕವೇ ದಾಖಲಿಸಬೇಕಾಗಿತ್ತು. ಪುತ್ತೂರಿನಲ್ಲಿದೂರು ನೀಡುವ ಅಗತ್ಯವೇನಿತ್ತು. ಇಂತಹ ದೂರುಗಳಿಗೆಲ್ಲ ನಾನು ಹೆದರಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಶಿವಮೊಗ್ಗದ ಮಾದರಿ ಹಾಸನ ಏರ್ಪೋರ್ಟ್ನಿರ್ಮಿಸಿ: ಶಿವಮೊಗ್ಗದ ವಿಮಾನ ನಿಲ್ದಾಣದ ಮಾದರಿಯಲ್ಲೇ ಹಾಸನದ ವಿಮಾನ ನಿಲ್ದಾಣವನ್ನೂ ನಿರ್ಮಿಸಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 1250 ಕೋಟಿರೂ. ಯೋಜನೆ ರೂಪಿಸಿ ಟೆಂಡರ್‌ ಕರೆಯುವ ಸಿದ್ಧತೆಮಾಡಿದ್ದೆ. ಕಳೆದ2ವರ್ಷಗಳಿಂದ ಬಿಜೆಪಿ ಸರ್ಕಾರ ಈಯೋಜನೆ ತಡೆ ಹಿಡಿದಿತ್ತು. ಈಗ ಸಿಎಂ ಖುದ್ದಾಗಿವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವುದಾಗಿಹೇಳಿರುವುದು ಸ್ವಾಗತಾರ್ಹ. ಶಿವಮೊಗ್ಗದ ವಿಮಾನನಿಲ್ದಾಣದ ಮಾದರಿಯಲ್ಲೇ ಹಾಸನದ ವಿಮಾನನಿಲ್ದಾಣ ನಿರ್ಮಾಣ ಆಗಬೇಕು ಎಂಬುದು ನಮ್ಮಒತ್ತಾಯ.

ಈಗಾಗಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಶಂಕುಸ್ಥಾಪನೆ ನೆರವೇರಿಸಿ  ಭೂಮಿಪೂಜೆ ಮಾಡಿದಾರೆ. ª ಹೀಗಾಗಿ ಈಗ ಶಂಕುಸ್ಥಾಪನೆಮಾಡುವ ಅಗತ್ಯವಿಲ್ಲ. ತ್ವರಿತವಾಗಿ ಕಾಮಗಾರಿಆರಂಭಿಸಲಿ ಎಂದು ಒತ್ತಾಯಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next