Advertisement

ಹಾಸನ: ಟಾಟಾಸುಮೋ ಗೆ ಕ್ವಾಲಿಸ್ ಡಿಕ್ಕಿ; 5 ಜನ ದುರ್ಮರಣ, 13 ಮಂದಿಗೆ ಗಂಭೀರ ಗಾಯ

12:22 PM Feb 21, 2021 | Team Udayavani |

ಹಾಸನ:  ಟಾಟಾಸುಮೋಗೆ ಕ್ವಾಲಿಸ್ ಡಿಕ್ಕಿಯಾದ ಪರಿಣಾಮ 5 ಜನ ಸಾವನ್ನಪ್ಪಿ, 13 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ  ಹಾಸನದ ಹೊರವಲಯದ ಕೆಂಚಟ್ಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ – 75 ರಲ್ಲಿ ಭಾನುವಾರ ಬೆಳಿಗ್ಗೆ (ಫೆ. 21) ನಡೆದಿದೆ.

Advertisement

ಮೃತಪಟ್ಟವರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್  ಎಂದು ಗುರುತಿಸಲಾಗಿದೆ.

ಕ್ವಾಲಿಸ್ ವಾಹನದಲ್ಲಿ ಎಂಟು ಮಂದಿ ಕೆಜಿಎಫ್‌ನಿಂದ‌ ಉಡುಪಿಗೆ ಮದುವೆಗೆ  ತೆರಳುತ್ತಿದ್ದರು. ಟಾಟಾಸುಮೋದಲ್ಲಿ ಹತ್ತು ಮಂದಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.  ರಸ್ತೆಯಲ್ಲಿ  ಹಂಪ್ಸ್ ಇದ್ದ ಕಾರಣ ಟಾಟಾಸುಮೋ‌‌ ವಾಹನ ಸ್ಲೋ  ಆದಾಗ ಹಿಂಬದಿಯಿಂದ ಬಂದ ಕ್ವಾಲಿಸ್ ಡಿಕ್ಕಿ ಹೊಡೆದಿದೆ. 5 ಜನ ದುರ್ಮರಣವನ್ನಪ್ಪಿದ್ದು, ಮಹಿಳೆಯರು, ಮೂವರು ಮಕ್ಕಳು ಸೇರಿ 13 ಮಂದಿಗೆ ತೀವ್ರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಕಾಸ್ ಗಂಜ್ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಯುಪಿ ಪೊಲೀಸರು

Advertisement

ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಭೇಟಿ ನೀಡಿದ್ದು, ಹಾಸನ ಸಂಚಾರಿ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ಲಿಫ್ ಕಾರ್ಟ್ ‘ಕೂಲಿಂಗ್ ಡೇಸ್ ಸೇಲ್’: AC, Refrigerator ಮುಂತಾದವುಗಳಿಗೆ ಭರ್ಜರಿ ಆಫರ್

Advertisement

Udayavani is now on Telegram. Click here to join our channel and stay updated with the latest news.

Next