Advertisement

ಎಸ್‌ಸಿ/ಎಸ್‌ಟಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಹರಿಯಾಣ ಸರಕಾರ

07:32 PM Dec 04, 2018 | Team Udayavani |

ಚಂಡೀಗಢ : ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾಗುವ ಕೇಸುಗಳನ್ನು ಇತ್ಯರ್ಥ ಪಡಿಸಲು ವಿಶೇಷ ನ್ಯಾಯಾಲಯಗಳನ್ನು ಹರಿಯಾಣ ಸರಕಾರ ಸ್ಥಾಪಿಸಲಿದೆ.

Advertisement

ಇಂದಿಲ್ಲಿ ನಡೆದ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ವಹಿಸಿದ್ದರು. 

ಮೊದಲ ಹಂತದಲ್ಲಿ ಈ ಬಗೆಯ ವಿಶೇಷ ನ್ಯಾಯಾಲಯಗಳನ್ನು ಹಿಸಾರ್‌, ಭಿವಾನಿ, ಕೈಥಾಲ್‌ ಮತ್ತು ರೇವಾರಿ ಜಿಲ್ಲೆಯಗಳಲ್ಲಿ  ಸ್ಥಾಪಿಸಲಾಗುವುದು. ಈ ನಾಲ್ಕು ಜಿಲ್ಲೆಗಳಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯದ ಕೇಸುಗಳು ಭಾರೀ ಸಂಖ್ಯೆಯಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. 

Advertisement

Udayavani is now on Telegram. Click here to join our channel and stay updated with the latest news.

Next