Advertisement

ಹರ್ಷನ ಕೊಲೆಗೆ ಹುಡುಗಿಯರನ್ನು ಬಳಸಿಕೊಂಡರೇ ಆರೋಪಿಗಳು; ಸ್ನೇಹಿತ ಹೇಳಿದ್ದೇನು?

03:39 PM Feb 23, 2022 | keerthan |

ಶಿವಮೊಗ್ಗ: ಕೆಲ ದಿನಗಳ ಹಿಂದೆ ಕೊಲೆಯಾದ ಹಿಂದೂ ಸಂಘಟನೆ ಯುವಕ ಹರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತ ಹಲವೊಂದು ವಿಚಾರಗಳನ್ನು ಬಹಿರಂಗ ಪಡಿಸಿದ್ದಾನೆ.

Advertisement

ಹರ್ಷನ ಕೊಲೆ ನಡೆದ ದಿನ ಕೊನೆ ಕ್ಷಣದಲ್ಲಿ ನಡೆದ ಘಟನೆಯೊಂದನ್ನು ಸ್ನೇಹಿತ ಬಹಿರಂಗ ಪಡಿಸಿದ್ದಾನೆ. ಘಟನೆ ನಡೆದ ಹರ್ಷನಿಗೆ ಇಬ್ಬರು ಹಡುಗಿಯರು ಕರೆ ಮಾಡಿದ್ದಾರೆ ಎನ್ನುವ ಮಾಹಿತಿಯ್ನು ಸ್ನೇಹಿತ ಹೇಳಿದ್ದಾನೆ.

“ಕೊಲೆಯಾಗುವುದಕ್ಕೂ ಮೊದಲೂ ಪದೇ ಪದೇ ಕರೆ ಮಾಡುತ್ತಿದ್ದ ಇಬ್ಬರು ಹುಡುಗಿಯರು ನಾನು ನಿಮ್ಮ ಸ್ನೇಹಿತರು ಎನ್ನುತ್ತಿದ್ದರು. ಈ ವೇಳೆ ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದಾನೆ. ಇವರು ಯಾರು ಎಂದು ಸ್ನೇಹಿತರಿಗೆ ಕೇಳಿದ್ದಾನೆ. ಇದಾದ ಬಳಿಕ ಸ್ನೇಹಿತರ ಜೊತೆ ತೆರಳಿದ್ದ. ಇದಾದ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದು ಹೋಗಿತ್ತು” ಎಂದು ಸ್ನೇಹಿತ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:ಪೊಲೀಸರಿಗೆ “ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌’ ಬಲ : ದಿನದ 24 ಗಂಟೆಯೂ ನಿಗಾ

ಕೊಲೆಯ ಬಳಿಕ ಹರ್ಷನ ಮೊಬೈಲ್ ನಾಪತ್ತೆಗಿದೆ. ಮೊಬೈಲ್ ಎಲ್ಲಿದೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಮೊಬೈಲ್ ಆರೋಪಿಗಳ ಬಳಿ ಇದೆಯೇ? ಆರೋಪಿಗಳು ಹುಡುಗಿಯರನ್ನು ಕೊಲೆಗೆ ಬಳಸಿಕೊಂಡರೇ? ಸಹಾಯ ಕೇಳುವ ನೆಪದಲ್ಲಿ ಹುಡುಗಿಯರಿಂದ ಕರೆ ಮಾಡಿಸಿ ಬಲೆ ಬೀಸಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಜನರಿಗೆ ಮೂಡಿದೆ.

Advertisement

ಸದ್ಯ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಂತೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ನಡೆಯತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next