Advertisement

ಕನ್ನಡ ಭವನಕ್ಕೆ ಹಾರಕೂಡ ಶ್ರೀಗಳ ಭೇಟಿ

11:44 AM Dec 09, 2021 | Team Udayavani |

ಕಲಬುರಗಿ: ನಗರದ ಕನ್ನಡ ಭವನಕ್ಕೆ ಭೇಟಿ ನೀಡಿದ ಹಾರಕೂಡದ ಶ್ರೀ ಡಾ| ಚನ್ನವೀರ ಶಿವಾಚಾರ್ಯ ಮಹಾ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಸತ್ಕರಿಸಿ, ಆಶೀರ್ವದಿಸಿದರು.

Advertisement

ನಂತರ ಮಾತನಾಡಿದ ಡಾ| ಚನ್ನವೀರ ಶಿವಾಚಾರ್ಯರು, ಯಾವುದೇ ಪಕ್ಷ, ಜಾತಿ, ಧರ್ಮ ಮರೆತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯ ಕನ್ನಡ ಭಾಷೆಗಿದೆ. ಕನ್ನಡ ಸಾಹಿತ್ಯ ಪರಿಷತ್‌ ನವರು ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹಾರೈಸಿದರು.

ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ನಾಡು-ನುಡಿ, ನೆಲ-ಜಲದ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಆಗಿದೆ. ಹೀಗಾಗಿ, ಪರಿಷತ್‌ ಘನತೆ ಉಳಿಸುವ ಮತ್ತು ಬೆಳೆಸುವ ಕಾರ್ಯವನ್ನು ಸದಾ ಕಾಲ ಮಾಡುತ್ತೇವೆ. ಇದಕ್ಕೆ ಸಾಹಿತಿಗಳು, ಕವಿ-ಕಲಾವಿದರು, ಶಿಕ್ಷಕರ ಸಹಕಾರ ಅಗತ್ಯವಿದೆ ಎಂದರು.

ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಶಿವರಾಜ ಅಂಡಗಿ, ಗೌರವ ಕೋಶಾಧ್ಯಕ್ಷ ಡಾ| ಶರಣರಾಜ್‌ ಛಪ್ಪರಬಂದಿ, ಪ್ರಮುಖರಾದ ಪ್ರಭುಲಿಂಗ ಮೂಲಗೆ, ರವೀಂದ್ರ ಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳಕರ್‌, ವಿಶ್ವನಾಥ ತೊಟ್ನಳ್ಳಿ, ಬಸವರಜ ತೋಟದ, ವಿನೋದ ಜೇನವೇರಿ, ಎಂ.ಎಸ್‌.ಪಾಟೀಲ ನರಿಬೋಳ, ಡಾ| ಬಾಬುರಾವ ಶೇರಿಕಾರ, ಮಂಜುನಾಥ ಕಂಬಾಳಿಮಠ, ಸಂತೋಷ ಕುಡಳ್ಳಿ, ಧರ್ಮಣ್ಣ ಧನ್ನಿ, ವಿದ್ಯಾಸಾಗರ ದೇಶಮುಖ, ಈರಣ್ಣಾ ನಾವಿ, ಹೆಚ್‌. ಎಸ್‌.ಬರಗಾಲಿ, ಬಿ.ಎಂ.ಪಾಟೀಲ ಕಲ್ಲೂರ, ಶ್ರೀಕಾಂತ ಪಾಟೀಲ ತಿಳಗೂಳ, ನಾಗೇಂದ್ರಪ್ಪ ಮಾಡ್ಯಾಳೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next