Advertisement

G Parameshwara: ಹರಿಪ್ರಸಾದ್‌ ಹೇಳಿದ್ದಾರೆಂದು ಡಿ.ಜೆ.ಹಳ್ಳಿ ಪ್ರಕರಣ ವಾಪಸ್‌ ಅಸಾಧ್ಯ

12:30 AM Oct 17, 2024 | Team Udayavani |

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ ಅಂತಾ ಹಿಂಪಡೆಯಲು ಆಗುವುದಿಲ್ಲ. ಒಂದು ವೇಳೆ ಈ ಸಂಬಂಧ ಪ್ರಸ್ತಾವನೆ ಬಂದರೆ ಪರಿಶೀಲಿಸುತ್ತೇವೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ ಹೇಳಿದರು.

Advertisement

ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಹರಿಪ್ರಸಾದ್‌ ಯಾವುದೋ ಕಾರಣಕ್ಕೆ ಹೇಳಿರಬಹುದು ಎಂದರು.ಅವರು ಹೇಳಿದ್ದಾರೆ ಅಂತಾ ವಾಪಸ್‌ ಪಡೆಯಲು ಆಗುವುದಿಲ್ಲ. ಪ್ರಸ್ತಾವ ಬಂದಾಗ ಪರಿಶೀಲನೆ ಮಾಡುತ್ತೇವೆ. ಆದರೆ ಸದ್ಯಕ್ಕಂತೂ ಈ ಸಂಬಂಧ ಯಾರೂ ಪತ್ರ ಬರೆದಿಲ್ಲ ಮತ್ತು ಪ್ರಸ್ತಾವನೆಯೂ ಬಂದಿಲ್ಲ. ಈ ಹಿಂದೆ ಪತ್ರ ಬರೆದಿದ್ದರು. ಆದರೆ ಅದು ಅಲ್ಲಿಯೇ ನಿಂತಿದೆ. ಈಗ ಪ್ರಸ್ತಾವ ಬಂದರೆ ಪರಿಶೀಲನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆಯಲ್ಲಿ ವಾಲ್ಮೀಕಿ ಹಗರಣದ ಪ್ರಸ್ತಾವ ಆಗಬಹುದು ಎಂದಾಗ, ಈ ಬಗ್ಗೆ ವಿಪಕ್ಷಗಳು ಪ್ರಚಾರ ಮಾಡಬಹುದು. ನಾವು ಅದರ ಬಗ್ಗೆ ಏನಾಗಿದೆ ಅಂತಾ ಹೇಳುತ್ತೇವೆ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಪ್ರಕರಣ. ದದ್ದಲ್‌ ಅವರನ್ನು ವಿಚಾರಣೆಗೆ ಕರೆದಿದ್ದರು. ಆದರೆ ಅವರ ಹೆಸರು ಪ್ರಕರಣದಲ್ಲಿ ಬರಲಿಲ್ಲ. ನಾಗೇಂದ್ರ ಅವರ ವಿಚಾರಣೆಯೂ ಆಗಿದೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next