Advertisement

ಹರಿಪ್ರಸಾದ್‌ ಗಾಳಿಗೆ ಗುದ್ದಿ ನೋವು ಮಾಡಿಕೊಳ್ಳುತ್ತಿದ್ದಾರೆ: ತಿಮ್ಮಾಪುರ

11:34 PM Jul 23, 2023 | Team Udayavani |

ಬಾಗಲಕೋಟೆ: ಎಂಎಲ್‌ಸಿ ಹರಿಪ್ರಸಾದ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಗಾಳಿಗೆ ಗುದ್ದಿ ಕೈ ನೋವು ಮಾಡಿಕೊಳ್ಳುತ್ತಾರೆ ಎಂಬ ಮಾತಿನಂತೆ ಅವರು ವರ್ತಿಸುತ್ತಿದ್ದಾರೆ. ಪಕ್ಷದ ಎಲ್ಲ ಶಾಸಕರೂ ಸಿಎಂ ಸಿದ್ದರಾಮಯ್ಯ ಪರವಾಗಿದ್ದಾರೆ. ನಮ್ಮ ಹೈಕಮಾಂಡ್‌ ಕೂಡ ಗಟ್ಟಿಯಾಗಿದೆ. ಬಿಜೆಪಿಯವರ ಯಾವುದೇ ಕುತಂತ್ರ ನಡೆಯದು ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್‌ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಾಗುತ್ತವೆ ಎಂಬುದು ಭ್ರಮೆ. ಅವರು ಸುಮ್ಮನೆ ತೌಡು ಕುಟ್ಟುತ್ತಿದ್ದಾರೆ. ಯಾವುದೋ ಸಭೆಯಲ್ಲಿ ಹೇಳಿದ್ದಾರೆ. ನೋಡಿ ನೋಡಿ ಸಾಕಾಗಿದೆ. ಹರಿಪ್ರಸಾದರ ಶಕ್ತಿ ನಮಗೆ ಗೊತ್ತಿಲ್ಲ. ಎಂಎಲ್‌ಎಗಳು, ಹೈಕಮಾಂಡ್‌ ಹೇಳಿದರೆ ಅದೊಂದು ಶಕ್ತಿ ಎಂದು ಹೇಳಬಹುದು. ಎಲ್ಲ ಶಾಸಕರೂ ಸಿದ್ದರಾಮಯ್ಯರನ್ನು ಶಾಸಕಾಂಗ ಪಕ್ಷದ ನಾಯಕರು ಎಂದು ಒಪ್ಪಿಕೊಂಡಿದ್ದಾರೆ. ಹಾಗಿರುವಾಗ ಹರಿಪ್ರಸಾದ್‌ ಯಾವ ದೃಷ್ಟಿಯಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next