Advertisement

ಗಂಗೆ ಸ್ಥಿತಿ ವಿಷಮ: ಎನ್‌ಜಿಟಿ ತರಾಟೆ

06:00 AM Jul 20, 2018 | Team Udayavani |

ನವದೆಹಲಿ: ಗಂಗಾನದಿ ಪುನಶ್ಚೇತನ ವಿಳಂಬ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ), ಪ್ರಸ್ತುತ ಗಂಗಾನದಿ ಪರಿಸ್ಥಿತಿ ಸಾಕಷ್ಟು ವಿಷಮವಾಗಿದೆ ಶುದ್ಧೀ ಕರಣಕ್ಕೆ ಯಾವುದಾರೂ ಪರಿಣಾಮಕಾರಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದೆ. 

Advertisement

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಗೋಯಲ್‌ ನೇತೃತ್ವದ ಪೀಠ, ಗಂಗಾ ಪುನಶ್ಚೇತನಕ್ಕೆ ಪ್ರಾಧಿಕಾರ ಕೈಗೊಂಡಿರುವ ಸುಧಾರಣೆ ಕ್ರಮಗಳು ಸಾಲದ್ದಾಗಿದೆ. ಗಂಗಾನದಿ ಮಾಲಿನ್ಯ ಸಂಬಂಧ ಜನಸಾಮಾನ್ಯ ರಿಂದ ಅಭಿಪ್ರಾಯ ಸಂಗ್ರ ಹಿಸಲು ಸರ್ವೆ ನಡಸಬೇಕು. ಈ ಕುರಿತು ಸಲಹೆ ಸೂಚನೆ ಪಡೆಯಬೇಕು ಎಂದು ತಾಕೀತು ಮಾಡಿದೆ. ಗಂಗಾನದಿ ಶುದ್ಧೀಕರಣಕ್ಕಾಗಿ  ಕೇಂದ್ರ ಸರ್ಕಾರ 7 ಸಾವಿರ ಕೋಟಿ ರೂ. ವ್ಯಯಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next