Advertisement

ಬಿಜೆಪಿಯ ಹೊಗಳಿದ ಹಾರ್ದಿಕ್‌ ಪಟೇಲ್‌

10:34 PM Apr 22, 2022 | Team Udayavani |

ಗಾಂಧಿನಗರ: ಪಕ್ಷದ ನಾಯಕತ್ವದ ಬಗ್ಗೆ ಹಲವು ದಿನಗಳಿಂದ ವಿರೋಧ ಹೊರಹಾಕುತ್ತಿರುವ ಗುಜರಾತ್‌ನ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ಇದೀಗ ಬಿಜೆಪಿಯನ್ನು ಹೊಗಳಿದ್ದಾರೆ.

Advertisement

“ಬಿಜೆಪಿ ತುಂಬ ಬಲವಾಗಿದೆ ಏಕೆಂದರೆ ಅವರಲ್ಲಿ ಉತ್ತಮ ನಾಯಕತ್ವವಿದೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾವೂ ರಾಮನ ಭಕ್ತರು. ನನ್ನ ತಂದೆಯ ಪುಣ್ಯತಿಥಿಯ ದಿನದಂದು 4,000 ಭಗವದ್ಗೀತೆ ಪ್ರತಿಗಳನ್ನು ಹಂಚಲಿದ್ದೇನೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ’ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಬಿಜೆಪಿ ಹಾರ್ದಿಕ್‌ ಅವರನ್ನು ಪ್ರಶಂಶಿಸಿದೆ. “ಪೂರ್ತಿ ದೇಶವೇ ಬಿಜೆಪಿಯ ಸಿದ್ಧಾಂತಕ್ಕೆ ಮನಸೋತಿದೆ. ಅದನ್ನು ಹಾರ್ದಿಕ್‌ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಆದರೆ ಅನೇಕರು ಹೇಳಿಕೊಳ್ಳುವುದಿಲ್ಲ’ ಎಂದು ಬಿಜೆಪಿ ಸಂಸದ ಸಿ.ಆರ್‌.ಪಾಟೀಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next