Advertisement

ಜನಾಂಗೀಯ ನಿಂದನೆ ವಿರುದ್ಧ ಸಿಡಿದ ಹರ್ಭಜನ್‌

01:37 PM Apr 27, 2017 | Karthik A |

ಮುಂಬಯಿ/ಹೈದರಾಬಾದ್‌: ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಮತ್ತು ಬಾಹುಬಲಿ-2 ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಜನಾಂಗೀಯ ನಿಂದನೆ ಆಗಿದೆ ಎಂದು ಆರೋಪಿಸಿದ್ದಾರೆ. ಚಂಡೀಗಢದಿಂದ ಮುಂಬಯಿಗೆ ತೆರಳುತ್ತಿದ್ದ ಜೆಟ್‌ ಏರ್‌ವೇಸ್‌ಗೆ ಸೇರಿದ ವಿಮಾನದಲ್ಲಿ ವಿದೇಶಿ ಪೈಲಟ್‌ ವಿಕಲ ಚೇತನ ಮಹಿಳೆಗೆ ಜನಾಂಗೀಯ ನಿಂದನೆ ನಡೆಸಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. ಆ ಪೈಲಟ್‌ ದೇಶ ಬಿಟ್ಟು ತೆರಳಲೇಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಜೆಟ್‌ ಏರ್‌ವೇಸ್‌ ವಿಷಾದ ವ್ಯಕ್ತಪಡಿಸಿ, ಪೈಲಟ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.

Advertisement

ಈ ನಡುವೆ ‘ಬಾಹುಬಲಿ-2’ ನಿರ್ಮಾಪಕ ಶೋಬು ಯರ್ಲಗಡ್ಡ ಕೂಡ ತಮ್ಮ ತಂಡಕ್ಕೂ ಎಮಿರೇಟ್‌ ಏರ್‌ಲೈನ್ಸ್‌ ಸಿಬಂದಿ ನಿಂದನೆ ನಡೆಸಿದ್ದಾರೆಂದು ದೂರಿದ್ದಾರೆ. ದುಬೈನಲ್ಲಿ ಪ್ರಚಾರ ಮುಗಿಸಿ ವಾಪಸು ಬರುವ ವೇಳೆ ನಿಲ್ದಾಣದಲ್ಲಿ ನಮ್ಮ ಇಡೀ ತಂಡದ ಜತೆ ಎಮಿರೇಟ್ಸ್‌ ಏರ್‌ಲೈನ್‌ ಸಿಬಂದಿ ಒರಟಾಗಿ ನಡೆದುಕೊಂಡಿತು ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next