Advertisement

ಕಿರುಕುಳ; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಡಿಯೋ ಬೆದರಿಕೆ

11:51 AM Jun 05, 2024 | Team Udayavani |

ಪಾವಗಡ: ತಾಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಮಂಗಳವಾರ ರಾತ್ರಿ  ಅಧಿಕಾರಿಗಳ‌ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡತ್ತಿದೆ.

Advertisement

ವಿಶ್ವೇಶ್ವರಯ್ಯ ಜಲನಿಗಮದಲ್ಲಿ ಎಂ.ಡಿ ಅಗಿರುವ ಪಾವಗಡ ತಾಲೂಕಿನ ಸಣ್ಣ ಚಿತ್ತಯ್ಯ ಅವರು ನನಗೆ ಬಿಲ್ ಹಣ ಬಿಡುಗಡೆ ಮಾಡದೆ ರಾಜಕೀಯ ಕಾರಣಗಳಿಂದ ಕಿರುಕಳ‌ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ವಿಶ್ವೇಶ್ವರಯ್ಯ ಜಲನಿಗಮ ಅಭಿವೃದ್ಧಿಯ ಅಡಿಯಲ್ಲಿ ಅನೇಕ‌ ಕಾಮಗಾರಿಗಳು ಮಾಡಿದ ಸುಜೀತ್ ಗೆ ಬಿಲ್ ನೀಡದೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಡಳಿತ ಕಾಂಗ್ರೆಸ್ ಪಕ್ಷದ‌ ಯೂತ್ ಕಾಂಗ್ರೆಸ್ ಅಧ್ಯಕ್ಷ ಅವರಿಗೆ ಅನ್ಯಾಯದ ಆಗಿದೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದು, ಇದೀಗ ತಾಲೂಕಿನಾದ್ಯಂತ ಈ ಬಗ್ಗೆ ಚರ್ಚೆಯಾಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next