Advertisement

ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ : ಯುವಕನಿಗೆ ಧರ್ಮದೇಟು

07:29 AM Oct 23, 2019 | Team Udayavani |

ಶಿವಮೊಗ್ಗ : ಬಸ್ಸಿನಲ್ಲಿ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಸಾಗರ ತಾಲೂಕಿನ ಆನಂದಪುರದಲ್ಲಿ ಮಂಗಳವಾರ ನಡೆದಿದೆ.

Advertisement

ಸಾಗರದಿಂದ ಆನಂದಪುರಕ್ಕೆ‌ ಬಸ್ಸಿನಲ್ಲಿ ಬರುವ ವಿದ್ಯಾರ್ಥಿನಿಯರಿಗೆ ಮದ್ಯದ ನಶೆಯಲ್ಲಿದ ಯುವನೋರ್ವ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರು ಬಸ್ಸು ಆನಂದಪುರ ನಿಲ್ದಾಣಕ್ಕೆ ತಲುಪುತಿದ್ದಂತೆ ಸಾರ್ವಜನಿಕರು ಯುವಕನಿಗೆ ಹಿಗ್ಗಾಮುಗ್ಗ ಬಾರಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಪೊಲೀಸರು ಯುವಕನಿಗೆ ಬುದ್ದಿ ಹೇಳಿ ಕಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next