Advertisement
ಪತ್ನಿ ಚಾಂದಸಾಬ್ ಬಾಬಣ್ಣವರ್ ಸೌದಿ ಅರೆಬಿಯಾದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ನನ್ನನ್ನು ಇಲ್ಲಿಂದ ಬೇಗ ಕರೆದುಕೊಂಡು ಹೋಗಿ, ನನಗೆ ಇಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಊಟವನ್ನೂ ಸರಿಯಾಗಿ ಕೊಡುತ್ತಿಲ್ಲ ಎಂದು ಗೋಗರೆಯುತ್ತಿದ್ದಾಳೆ. ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ ಎಂದು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ನನಗೆ ದಿಕ್ಕೇ ತೋಚದಂತಾಗಿದೆ. ನನ್ನ ಪತ್ನಿ ರಕ್ಷಿಸಿ ಭಾರತಕ್ಕೆ ಕರೆ ತರಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ಪತಿ ಬಾಬುಸಾಬ್ ಕಣ್ಣೀರಿಟ್ಟರು.
ಪ್ರತಿ ತಿಂಗಳು 40 ಸಾವಿರ ವೇತನ ಕೊಡಲಾಗುತ್ತೆ. ಅಲ್ಲಿನ ಮಕ್ಕಳಿಗೆ ಖುರಹಾನ್ ಪಠಣ ಮಾಡಿಸಲು ಚಾಂದ್ ಸುಲ್ತಾನ್ ಅವರನ್ನು ಕಳುಹಿಸಿಕೊಡುವಂತೆ ಈ ಕುಟುಂಬಕ್ಕೆ ಪುಸಲಾಯಿಸಿದ್ದಾನೆ. ಇದಕ್ಕೆ ಒಪ್ಪಿದ ಬಾಬುಸಾಬ್ ತನ್ನ ಪತ್ನಿಯನ್ನು 3 ತಿಂಗಳ ಹಿಂದೆ ಸೌದಿ ಅರಬಿಯಾಗೆ ಕಳುಹಿಸಿದ್ದಾನೆ. ಸೌದಿ ಅರೆಬಿಯಾದ ಏಜೆಂಟ್ ಆರೀಫ್ ಮೂಲಕ ರಿಯಾಜ್ ಎನ್ನುವ ಏರಿಯಾದಲ್ಲಿನ ಫರೀದ್ಸಾಬ್ ಎನ್ನುವ ಮನೆ ಮಾಲೀಕರ ಮನೆಯಲ್ಲಿ ಚಾಂದ ಸುಲ್ತಾನ್ ಅವರನ್ನು ಕೆಲಸಕ್ಕೆ ಇರಿಸಿದ್ದಾರೆ. ಆದರೆ ನನ್ನ ಪತ್ನಿಗೆ ಖುರಹಾನ್ ಪಠಣ ಕೆಲಸ ಕೊಡಿಸುವುದು ಬಿಟ್ಟು ಶೌಚಾಲಯ
ಸ್ವತ್ಛತೆ, ಮನೆ ಸ್ವತ್ಛತೆಗೆ ಇಟ್ಟುಕೊಂಡಿದ್ದಾರೆ. ತಿಂಗಳಿಗೊಮ್ಮೆ ನನಗೆ ಕರೆ ಮಾಡಿ, ನನಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ. ನನಗೆ ಊಟ ಕೊಡುತ್ತಿಲ್ಲ. ಒಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ನನ್ನನ್ನು ಕೂಡಲೇ ಇಲ್ಲಿಂದ ಕರೆದುಕೊಂಡು ಹೋಗಿ ಎಂದು ದೂರವಾಣಿ ಮೂಲಕ ಕೊಪ್ಪಳದ ತನ್ನ ಪತಿ ಬಾಬುಸಾಬ್ಗ ಕರೆ ಮಾಡಿದ್ದಾಳೆ. ಇದರಿಂದ ವಿಚಲಿನಾದ ಪತಿ ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ಗೋಳಾಡಿ ಕಣ್ಣೀರಿಟ್ಟಿದ್ದಲ್ಲದೆ ನನ್ನ ಪತ್ನಿಯನ್ನು ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದರು.
Related Articles
ಸಂಗಣ್ಣ ಕರಡಿ, ಸಂಸದ
Advertisement
ನನ್ನ ಪತ್ನಿಗೆ ಸೌದಿ ಅರೇಬಿಯಾದಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮನೆಯೊಂದರಲ್ಲಿ ಕೂಡಿ ಹಾಕಿದ್ದಾರಂತೆ. ನನ್ನ ಪತ್ನಿ ರಸ್ತೆ ಪಕ್ಕ ಹೊರಟಿದ್ದ ಯುವಕನಿಂದ ಕಿಟಕಿ ಮೂಲಕ ಫೋನ್ ಪಡೆದು ನನಗೆ ವಿಷಯ ತಿಳಿಸಿದ್ದಾಳೆ. ನನ್ನ ಪತ್ನಿ ಸಂಕಷ್ಟದಲ್ಲಿದ್ದಾಳೆ. ರಕ್ಷಿಸಲು ಸಂಸದರಿಗೆ ಮನವಿ ಮಾಡಿದ್ದೇನೆ.ಬಾಬುಸಾಬ್ ಬಾಬಣ್ಣನವರ್, ಪತಿ