Advertisement

ಹೊಸ ವರ್ಷದ ಶುಭಾಶಯಗಳು: ವರ್ಷಾರಂಭದದಲ್ಲಿ ನಿಮ್ಮ ದಿನಭವಿಷ್ಯ ಹೇಗಿದೆ ?

07:32 AM Jan 01, 2021 | Team Udayavani |

ಮೇಷ: ನಿಮ್ಮ ಆಪ್ತರೇ ನಿಮ್ಮ ಬಗ್ಗೆ ಬೇಜಾವಾಬ್ದಾರಿಯಿಂದ ವರ್ತಿಸಬಹುದು. ಅವರ ಹೊಣೆಗೇಡಿತನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಅನಿರೀಕ್ಷಿತವಾಗಿ ದೂರ ಸಂಚಾರದ ಸಾಧ್ಯತೆ ಕಂಡುಬರಲಿದೆ. ಫ‌ಲವು ಉತ್ತಮವಿದ್ದೀತು.

Advertisement

ವೃಷಭ: ಸಾಮಾಜಿಕ ಚಟುವಟಿಕೆಗಳಲ್ಲಿ ಮುನ್ನಡೆ ಕಂಡುಬರುವುದು. ಆರೋಗ್ಯದ ಕಡೆ ಗಮನ ಕೊಡಿರಿ. ಸಾಂಸಾರಿಕ ಜೀವನವು ಸಮಾಧಾನಕರವಾಗಿರುವುದು. ಆದರೂ ಹೊಂದಾಣಿಕೆಯ ಅಗತ್ಯವಿರುತ್ತದೆ. ಮನಶುದ್ಧಿಯಾಗಿರಲಿ.

ಮಿಥುನ: ಹಿರಿಯರ ಸಲಹೆಗೆ ಕಿವಿಗೊಡಿರಿ. ಪ್ರತಿಯೊಂದು ವಿಷಯವನ್ನು ತಕ್ಷಣವೇ ಇತ್ಯರ್ಥಪಡಿಸಿ ಕೊಳ್ಳುವುದು. ಕಾರ್ಯರಂಗದಲ್ಲಿ ಆಪ್ತರ ಸಲಹೆಗಳನ್ನು ಸ್ವೀಕರಿಸುವುದು ಒಳಿತು. ಕಠಿಣ ಪರಿಶ್ರಮಕ್ಕೆ ತಕ್ಕ ಫ‌ಲವು ದೊರಕಲಿದೆ.

ಕರ್ಕ: ಸಹೋದ್ಯೋಗಿಗಳೊಡನೆ ಗುಣಾತ್ಮಕ ವರ್ತನೆ ತೋರಿಸಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಚಂಚಲತೆ. ಮಾನಸಿಕ ದೃಢತೆ ಕುಂಠಿತಗೊಳ್ಳಲಿದೆ. ಕೌಟುಂಬಿಕ ಸಮಸ್ಯೆ ಎದುರಾಗಲಿದೆ.

ಸಿಂಹ: ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರದು. ನಿಮ್ಮ ಯೋಜನೆಗಳನ್ನು ಹೇಗೆ ಮುಂದಿಡುತ್ತೀರಿ ಎಂಬುದರ ಮೇಲೆ ಬಹುತೇಕ ವಿಷಯಗಳು ಅವಲಂಬಿತವಾಗಲಿದೆ. ಶುಭ ವಾರ್ತೆ.

Advertisement

ಕನ್ಯಾ: ನಿಮ್ಮ ಮಾನಸಿಕ ಚಿಂತೆಗಳು ಪದೇ ಪದೇ ಬದಲಾಗಲಿದೆ. ನಿಮ್ಮ ಸಾಮರ್ಥ್ಯದ ಅತಿರೇಕದಿಂದ ಪಶ್ಚಾತ್ತಾಪ ಪಡುವ ಸಂಭವ ಬಂದೀತು. ಇತರರ ಉತ್ತಮ ಸಲಹೆಗೆ ಗಮನ ನೀಡಿರಿ. ಆರ್ಥಿಕವಾಗಿ ಬಿಕ್ಕಟ್ಟು ತೋರಲಿದೆ.

ತುಲಾ: ಆರ್ಥಿಕವಾಗಿ ಸ್ಥಿರಗೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಗಳು ಇತರರ ಗಮನಸೆಳೆಯಲಿವೆ. ದಿನಾಂತ್ಯದಲ್ಲಿ ಹಲವು ರೀತಿಯ ಖರ್ಚುಗಳು ತೋರಿಬಂದಾವು. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಿರಿ.

ವೃಶ್ಚಿಕ: ನಿಮ್ಮ ಪರಿಚಿತರೊಬ್ಬರು ನಿಮ್ಮ ಬೆಂಗಾವಲಿಗೆ ನಿಲ್ಲಲಿದ್ದಾರೆ. ನಿಮ್ಮ ತಾಳ್ಮೆ ಸಹನೆ ನಿಮಗೆ ಆಧಾರವಾಗಲಿದೆ. ನಿಮ್ಮ ಕೆಲಸಕಾರ್ಯಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಸಿರಿ. ಅತೀ ವಿಶ್ವಾಸ ಯಾರಲ್ಲೂ ಬೇಡ.

ಧನು: ನಿಮ್ಮ ಕೆಲಸಕಾರ್ಯಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಸಿರಿ. ಆರ್ಥಿಕವಾಗಿ ಹೆಚ್ಚಿನ ಉನ್ನತಿ ಕಂಡುಬರುವುದು. ಹಣಕಾಸಿನ ಬಗ್ಗೆ ಸಮತೋಲನವನ್ನು ಕಾಯ್ದುಕೊಳ್ಳಿರಿ. ಯಾವುದಕ್ಕೂ ಸಂಘರ್ಷ ಮಾಡದಿರಿ.

ಮಕರ: ಪ್ರಣಯ ಪ್ರಸಂಗಗಳಲ್ಲಿ ಅಡೆತಡೆಗಳು ತೋರಿಬಂದಾವು. ಅನಿರೀಕ್ಷಿತವಾಗಿ ಆಪ್ತರೊಬ್ಬರಿಗೆ ಆರ್ಥಿಕ ನೆರವು ನೀಡಬೇಕಾಗಿಬರಬಹುದು. ಇದರ ಬಗ್ಗೆ ಹೆಚ್ಚಿನ ಚಿಂತೆ ಬೇಡ. ಬಂಧುಮಿತ್ರರ ಆಗಮನವಿರುತ್ತದೆ.

ಕುಂಭ: ದಾಯಾದಿಗಳ ಕಲಹ, ವೈರತ್ವವು ಶಾಂತವಾಗದು. ತಾಳ್ಮೆ, ಸಹನೆ ಇರಲಿ. ಹಾಳು ಅಭ್ಯಾಸದ ಮಿತ್ರರ ಸಹವಾಸವು ಅವಮಾನ ತರಲಿದೆ. ಹಿರಿಯರಿಗೆ ಅನಾರೋಗ್ಯವು ಕಾಡೀತು. ನಿವೇಶನ ಖರೀದಿ ಇದ್ದೀತು.

ಮೀನ: ಕೆಲವೊಂದು ವಿಚಾರಗಳು ನಿಮ್ಮ ಬಗ್ಗೆ ಗೊಂದಲ ಸೃಷ್ಟಿಸಬಹುದು. ಹಣಕಾಸಿನ ವಿಚಾರದಲ್ಲಿ ಅತೀ ಹೆಚ್ಚಿನ ಜಾಗ್ರತೆ ಮಾಡಿರಿ. ಮಿತ್ರರ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟಲ್ಲಿ ಮೋಸ ಹೋಗುವಿರಿ. ಜಾಗ್ರತೆ ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next