Advertisement

ಅಪ್ಪು ಫೋಟೋದೊಂದಿಗೆ ಅಂಜನಾದ್ರಿಗೆ: ಅಭಿಮಾನ ಮೆರೆದ ಹನುಮ ಭಕ್ತರು

07:26 PM Dec 16, 2021 | Team Udayavani |

ಗಂಗಾವತಿ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಯುವಜನರು ಮತ್ತು ಹನುಮ ಭಕ್ತರು ಎಂದಿಗೂ ಮರೆಯುವುದಿಲ್ಲ, ಗುರುವಾರ ಅಂಜನಾದ್ರಿಯಲ್ಲಿ ಜರುಗಿದ ಹನುಮ ಮಾಲೆ ವಿಸರ್ಜನೆ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋದೊಂದಿಗೆ ಹನುಮ ಮಾಲೆ ವಿಸರ್ಜನೆಗಾಗಿ ಹನುಮ ಭಕ್ತರು ಆಗಮಿಸಿ ಅಭಿಮಾನ ಮೆರೆದರು.

Advertisement

ಇತ್ತೀಚಿಗೆ ನಿಧನರಾದ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದಲ್ಲಿ ತಮ್ಮ ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲಿ ತಪ್ಪದೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಆಂಜನೇಯನ ದರ್ಶನ ಪಡೆಯುತ್ತಿದ್ದರು .ಇದನ್ನು ಗಮನಿಸಿದ ಅವರ ಅಭಿಮಾನಿಗಳು ಗುರುವಾರ ಮಾಲೆ ವಿಸರ್ಜನೆ ಸಂದರ್ಭದಲ್ಲಿ ಪುನೀತ್ ಅವರ ಭಾವಚಿತ್ರ ಗಳನ್ನೂ ಹೊತ್ತುಕೊಂಡು ಅಂಜನಾದ್ರಿಗೆ ಆಗಮಿಸಿದ್ದು ಗಮನ ಸೆಳೆಯಿತು.

ಇದನ್ನೂ ಓದಿ : ನಿರ್ಬಂಧದ ಮಧ್ಯೆಯೂ ಅಂಜನಾದ್ರಿಗೆ ಹರಿದು ಬಂದ ಕೇಸರಿಧಾರಿ ಹನುಮಭಕ್ತರು

ಹೊಸಪೇಟೆಯಿಂದ ಆಗಮಿಸಿದ್ದ ಹನುಮಮಾಲಾಧಾರಿಗಳು ಜೈ ಭಜರಂಗಬಲಿ,ಜೈ ಹನುಮಭಕ್ತ ಪವರ್ ಸ್ಟಾರ್ ಪುನೀತ ಅಮರ ರಹೇ ಎಂದು ಘೋಷಣೆ ಕೂಗುತ್ತಿದ್ದರು.

ಅಂಜನಾದ್ರಿಗೆ ಆಗಮಿಸಿದ್ದ ಇತರೆ ಹನುಮಭಕ್ತರು ಪುನೀತ್ ಪೊಟೋ ಹೊತ್ತು ತಂದ ಹನುಮಮಾಲಾಧಾರಿಗಳ ಜತೆ ಮೊಬೈಲ್‌ಗಳ ಮೂಲಕ ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ಕಂಡು ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next