Advertisement

ಕರವಸ್ತ್ರ, ಬಟ್ಟೆಯನ್ನೂ ಮಾಸ್ಕ್ ಎಂದೇ ಪರಿಗಣಿಸಬೇಕು: ಬಿಬಿಎಂಪಿ ಆಯುಕ್ತರು

01:46 PM Nov 06, 2020 | keerthan |

ಬೆಂಗಳೂರು: ನಗರದಲ್ಲಿ ಕರ್ಚೀಫ್ (ಕರವಸ್ತ್ರ) ಹಾಗೂ ಬಟ್ಟೆಯ ಮೂಲಕ ಮೂಗು ಮತ್ತು ಬಾಯಿ ಮುಚ್ಚಿಕೊಂಡಿದ್ದರೂ ಮಾಸ್ಕ್ ಎಂದೇ ಪರಿಗಣಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದರು.

Advertisement

ನಗರದಲ್ಲಿ ಪೊಲೀಸ್, ಬಿಬಿಎಂಪಿ ಹಾಗೂ‌ ಮಾರ್ಷಲ್ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಕಡ್ಡಾಯವಾಗಿ‌ ಇಂತದ್ದೇ ಮಾಸ್ಕ್ ಧರಿಸಬೇಕು ಎಂಬ ನಿಯಮ ಇಲ್ಲ. ಬಡವರಿಗೆ 50 ರೂ. ನೀಡಿ‌ ಮಾಸ್ಕ್ ಖರೀದಿಸುವ ಸಾಮರ್ಥ್ಯ ಇಲ್ಲದೆ ಇರಬಹುದು. ಹೀಗಾಗಿ, ಬಟ್ಟೆ ಹಾಗೂ ಕರವಸ್ತ್ರದಿಂದ ರಕ್ಷಣೆ ಪಡೆಯಬಹುದು ಎಂದರು.

ನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾತನಾಡಿ, ಇದಕ್ಕಾಗಿ ಸಂಚಾರ ಪೊಲೀಸರನ್ನು ಬಳಸಿಕೊಳ್ಳಲಾಗುವುದು. ಮಾರ್ಷಲ್ ಗಳ ಕೆಲಸಕ್ಕೆ ಅಡ್ಡಿ ಪಡಿಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಮಾರ್ಷಲ್ ಗಳ ಮೇಲೆ ಹಲ್ಲೆ ಮಾಡುವವರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ನಮ್ಮನ್ನು ಎದುರಿಸಲಾಗದ ಬಿಜೆಪಿ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮಾಡುತ್ತಿದೆ: ಕಾಂಗ್ರೆಸ್

Advertisement

Udayavani is now on Telegram. Click here to join our channel and stay updated with the latest news.

Next