Advertisement

ದಾವೂದ್‌ ಹಸ್ತಾಂತರಿಸಿ; ಮಾತುಕತೆಗೆ ಬನ್ನಿ: ಜೈಶಂಕರ್‌

10:15 AM Nov 17, 2019 | Team Udayavani |

ಲಂಡನ್‌: ಭಾರತದ ಜತೆಗೆ ಪಾಕಿಸ್ಥಾನ ಉತ್ತಮ ಬಾಂಧವ್ಯ ಹೊಂದ ಬಯಸಿದ್ದೇ ಆದಲ್ಲಿ, ಕೇಂದ್ರ ಸರಕಾರ ಈಗಾಗಲೇ ಸಲ್ಲಿಸಿರುವ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ನಮಗೆ ಹಸ್ತಾಂತರ ಮಾಡಬೇಕು. ಅದು ಭಯೋತ್ಪಾದನೆಗೇ ಮುಕ್ತವಾಗಿ ಬೆಂಬಲ ಸೂಚಿಸುತ್ತಿರುವ ಹಂತದಲ್ಲಿ ಅದರ ಜತೆಗೆ ಯಾರು ಮಾತುಕತೆ ನಡೆಸುತ್ತಾರೆ ಎಂದು ವಿದೇಶಾಂಗ ಎಸ್‌.ಜೈಶಂಕರ್‌ ಪ್ರಶ್ನಿಸಿದ್ದಾರೆ.

Advertisement

ಫ್ರಾನ್ಸ್‌ನ “ಲಿ ಮೊಂಡೇ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಉಗ್ರಗಾಮಿ ಗಳನ್ನು ಕಳುಹಿಸುವ ಅಂಶವನ್ನು ಅದು ನಿರಾಕರಿಸಿಯೂ ಇಲ್ಲ ಎಂದು ಹೇಳಿದ್ದಾರೆ. ಅಂಥ ರಾಷ್ಟ್ರದ ಜತೆಗೆ ಯಾರು ತಾನೇ ಮಾತುಕತೆ ನಡೆಸಲು ಸಿದ್ಧರಾಗಿರುತ್ತಾರೆ ಎಂದು ಪ್ರಶ್ನಿಸಿದ್ದಾರೆ.

“ನಮ್ಮ ದೇಶದಲ್ಲಿ ಹಲವು ಕುಕೃತ್ಯಗಳನ್ನು ಮಾಡಿದ ದಾವೂದ್‌ ಇಬ್ರಾಹಿಂ, ಮೂಲತಃ ಮುಂಬಯಿಯವನು. ಅವನನ್ನು ವಿಶ್ವಸಂಸ್ಥೆಯೇ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ಆತನನ್ನು ಏಕೆ ಹಸ್ತಾಂತರ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ರಾಷ್ಟ್ರೀಯತೆಯ ಬಗ್ಗೆ ಪ್ರಸ್ತಾಪ ಮಾಡಿದ ಜೈಶಂಕರ್‌, ಅದನ್ನು “ಪಾಶ್ಚಿಮಾತ್ಯ ರಾಷ್ಟ್ರಗಳ ದೃಷ್ಟಿಕೋನದಲ್ಲಿ ನೋಡಬಾರದು’ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆ ಯುವುದಕ್ಕೆ ಮೊದಲು ಕೆಲವೊಂದು ಭದ್ರತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next