Advertisement

Haleyangadi: ಹುಚ್ಚು ನಾಯಿ ಕಡಿತ, ಆತಂಕಗೊಂಡ ಗ್ರಾಮಸ್ಥರು

08:57 PM Oct 08, 2023 | Team Udayavani |

ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಬಳಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಪಾದಾಚಾರಿಗಳ ಸಹಿತ ದ್ವಿಚಕ್ರ ವಾಹನ ಸವಾರರಿಗೆ ಹುಚ್ಚು ನಾಯಿ ಕಚ್ಚಿದ ಘಟನೆ ರವಿವಾರ ನಡೆದಿದೆ.

Advertisement

ಕೊಳುವೈಲಿನ ನಿವಾಸಿಯೋರ್ವರು, ಗ್ರಾಮ ಪಂಚಾಯತ್‌ ಬಳಿಯ ಟೈಲರ್‌, ಹಳೆಯಂಗಡಿಯ ಛಾಯಾಗ್ರಾಹಕರೋರ್ವರಿಗೆ ಬೀದಿಯಲ್ಲಿ ಅಡ್ಡಾಡುತ್ತಿರುವ ಹುಚ್ಚು ನಾಯಿ ಕಚ್ಚಿದ್ದು ಮೂವರೂ ಸಹ ಕಟೀಲು ಹಾಗೂ ಮೂಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ.

ತಿಂಗಳ ಹಿಂದೆ ಹಳೆಯಂಗಡಿ ಗ್ರಾಮ ಪಂಚಾಯತ್‌ ಇದರ ಬಗ್ಗೆ ಉಲ್ಲೇಖೀಸಿ ಬೀದಿ ನಾಯಿ ಹಾಗೂ ಹುಚ್ಚು ನಾಯಿಗಳ ಎಚ್ಚರಿಕೆಯ ಫಲಕವನ್ನು ಅಲ್ಲಲ್ಲಿ ಪ್ರಕಟಿಸಿತ್ತು. ಇದೀಗ ಸ್ಥಳೀಯರು ಮೌಖಿಕವಾಗಿ ಗ್ರಾಮ ಪಂಚಾಯತ್‌ನ ಪ್ರಮುಖರಿಗೆ ತಿಳಿಸಿದ್ದು ಹುಚ್ಚು ನಾಯಿ ಹಾಗೂ ಬೀದಿ ನಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next