Advertisement

ಹಾಳೆಕಟ್ಟೆ -ಕಲ್ಕಾರ್‌ ಸಂಪರ್ಕ ರಸ್ತೆ ಸಂಚಾರ ದುಸ್ತರ

10:28 PM Aug 20, 2019 | Team Udayavani |

ಪಳ್ಳಿ: ಕಲ್ಯಾ ಗ್ರಾ.ಪಂ. ವ್ಯಾಪ್ತಿಯ ಹಾಳೆಕಟ್ಟೆ- ಕಲ್ಕಾರ್‌ ಸಂಪರ್ಕ ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು ವಾಹನ ಸವಾರರು ಸಂಕಷ್ಟಪಡುವಂತಾಗಿದೆ.

Advertisement

ರಸ್ತೆಯು ಸುಮಾರು 4 ಕಿ.ಮೀ. ಉದ್ದವಿದ್ದು, 2 ಕಿ.ಮೀ. ರಸ್ತೆಯು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಕಳೆದ ಜನವರಿಯಲ್ಲಿ ಮರುಡಾಮರೀಕರಣಗೊಂಡಿತ್ತು. ಈ ಹಿಂದೆ ಸ್ಥಳೀಯರು ಕ್ರಷರ್‌ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಸಿದ್ದ ಪರಿಣಾಮ ಕ್ರಷರ್‌ ಮಾಲಕರು ಅಲ್ಲಲ್ಲಿ ತೇಪೆಕಾರ್ಯ ನಡೆಸಿದ್ದು ಬಿಟ್ಟರೆ ಉಳಿದ 2 ಕಿ.ಮೀ. ರಸ್ತೆಗೆ ಯಾವುದೇ ಕಾಮಾಗಾರಿ ನಡೆದಿಲ್ಲ.

ಡಾಮರೀಕರಣ ನಡೆಸದೆ ಇರುವ ಈ 2 ಕಿ.ಮೀ. ರಸ್ತೆ ಬೃಹತ್‌ ಹೊಂಡಗಳಿಂದ ಕೂಡಿದ್ದು, ಇವುಗಳಲ್ಲಿ ಮಳೆ ನೀರು ನಿಲ್ಲುತ್ತಿರುವ ಪರಿಣಾಮ ದ್ವಿಚಕ್ರ ವಾಹನ ಸವಾರರು ಸಂಕಷ್ಟಪಡುವಂತಾಗಿದೆ.

ಹಾಳೆಕಟ್ಟೆಯಲ್ಲಿರುವ ಗ್ರಾ.ಪಂ. ಹಾಗೂ ಗ್ರಾಮಕರಣಿಕರ ಕಚೇರಿ ಸಂಪರ್ಕಿಸಲು ಈ ರಸ್ತೆ ಅತ್ಯವಶ್ಯ. ಈ ಭಾಗದಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿದ್ದು ಜನರು ಕಾರ್ಕಳ, ಪಳ್ಳಿ ಸಂಚರಿಸಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಪಳ್ಳಿ-ಮಣಿಪಾಲ ಸಂಪರ್ಕಕ್ಕೂ ಇದು ಅತೀ ಹತ್ತಿರದ ರಸ್ತೆ. ಆದ್ದರಿಂದ ಶೀಘ್ರ ಬಾಕಿ ಉಳಿದ 2 ಕಿ.ಮೀ ರಸ್ತೆ ಡಾಮರೀಕರಣಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ.

ಘನ ವಾಹನ ಸಂಚಾರ

Advertisement

ಈ ಭಾಗದಲ್ಲಿ ಕ್ರಷರ್‌ಗಳಿದ್ದು ಬೃಹತ್‌ ಲಾರಿಗಳು ಸಂಚರಿಸಿ ರಸ್ತೆಗಳಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿವೆ. ಕಳೆದ ನಾಲ್ಕು ತಿಂಗಳ ಹಿಂದೆ ಕಲ್ಯಾ ಕೈರಬೆಟ್ಟು ನಿವಾಸಿಗಳು ಕ್ರಷರ್‌ಗಳ ವಿರುದ್ದ ಬೃಹತ್‌ ಘನ ವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದ್ದರು. ಘನವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಫೋನ್‌-ಇನ್‌ ಕಾರ್ಯಕ್ರಮದಲ್ಲಿಯೂ ಗ್ರಾಮಸ್ಥರು ಗಮನ ಸೆಳೆದಿದ್ದರು.

– ಸಂದೇಶ ಪಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next