Advertisement

ಗ್ರಾಪಂ ಮಟ್ಟದಲ್ಲಿ ಮದ್ಯವರ್ಜನ ಕಾರ್ಯಕ್ರಮ

11:22 AM Feb 03, 2020 | Naveen |

ಹಳೇಬೀಡು: ರಾಜ್ಯ ಸರ್ಕಾರ ಗ್ರಾಪಂ ಮಟ್ಟದಲ್ಲಿ ಮದ್ಯ ವರ್ಜನ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ತರಳಬಾಳು ಶ್ರೀಗಳು ಮದ್ಯ ವರ್ಜನ ಶಿಬಿರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಶ್ರೀಗಳ ಆಶಯದಂತೆ ಮದ್ಯ ವರ್ಜನ ಕಾರ್ಯಕ್ರಮ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಭಾವೈಕ್ಯತೆಯ ಸಂಕೇತ: ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಜಾತಿ, ಮತ ಪಂಥ ಚೌಕಟ್ಟನ್ನು ಮೀರಿ ಜನರ ಭಾವೈಕ್ಯತೆಯನ್ನು ಸಾರುವ ಕಾರ್ಯ ಕ್ರಮ ವಾಗಿದೆ. ಅರ್ಧ ಶತಮಾನ ಗಳಿಗೂ ಹೆಚ್ಚು ಕಾಲ ಪ್ರತಿ ವರ್ಷ ಒಂದೊಂದು ಊರಿನಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಮೂಲಕ ಜನರಿಗೆ ಜ್ಞಾನ ದಾಸೋಹ ಏರ್ಪಡಿಸುವ ಮಹತ್ಕಾ ರ್ಯವನ್ನು ಶ್ರೀಗಳು ಮಾಡು ತ್ತಿರುವುದು ಶ್ಲಾಘನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next