Advertisement

ಹಕ್ಕಿಪಿಕ್ಕಿ ಕ್ಯಾಂಪ್ ತೆರವು ಕಾರ್ಯಾಚರಣೆ: ಅಡ್ಡಿಪಡಿಸಿದವರ ಬಂಧನ

02:44 PM Oct 17, 2022 | Team Udayavani |

ಶಿವಮೊಗ್ಗ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಹಕ್ಕಿಪಿಕ್ಕಿ ಜನರ ಕ್ಯಾಂಪ್ ತೆರವು ಕಾರ್ಯಾಚರಣೆ ಇಂದು ನಡೆಯಿತು. ಜಿಲ್ಲೆಯ ಮಲ್ಲಿಗೆನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪನ್ನು ಪೊಲೀಸರ ಸಹಾಯದಿಂದ ಅಧಿಕಾರಿಗಳು ತೆರವುಗೊಳಿಸಿದರು.

Advertisement

ಮಲ್ಲಿಗೆನಹಳ್ಳಿಯಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದ ಜಾಗದಲ್ಲಿ ಹಕ್ಕಿಪಿಕ್ಕಿ ಜನರು ಅನಧಿಕೃತವಾಗಿ ಗುಡಿಸಲು ಹಾಕಿಕೊಂಡಿದ್ದರು. ಹೀಗಾಗಿ ಇಂದು ಪೊಲೀಸ್ ಬಂದೋಬಸ್ತ್ ನಲ್ಲಿ ಬಂದ ನೀರಾವರಿ ನಿಗಮದ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದರು.

ಇದನ್ನೂ ಓದಿ:ನಟಿ ವೈಶಾಲಿ ಟಕ್ಕರ್ ಪ್ರಕರಣ : ದಂಪತಿಗಳ ವಿರುದ್ದ ಪ್ರಚೋದನೆ ಕೇಸ್

ಅಧಿಕಾರಿಗಳು ಜೆಸಿಬಿ ಮೂಲಕ ಮನೆ, ಕಾಪೌಂಡ್ ಕೆಡವುತ್ತಿದ್ದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಕಾರ್ಯಾಚರಣೆಗೆ ವಿರೋಧ ಮಾಡಿದರು. ಅಡ್ಡಿಪಡಿಸಿದವರನ್ನು ಬಂಧಿಸಿದ ಪೊಲೀಸರು, ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next