Advertisement

ಹಜ್‌ ಯಾತ್ರಿಕರ ಸಬ್ಸಿಡಿ ತಡೆ: ಸಿದ್ದರಾಮಯ್ಯ ವಿರೋಧ

06:00 AM Jan 21, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಹಜ್‌ ಯಾತ್ರಿಕರ ಸಬ್ಸಿಡಿ ನಿಲ್ಲಿಸಿರುವುದು ಅಲ್ಪ ಸಂಖ್ಯಾತರ ಬಗ್ಗೆ ಕೇಂದ್ರ ಸರ್ಕಾರಕ್ಕಿರುವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಹಜ್‌ಯಾತ್ರೆಗೆ ರಾಜ್ಯದಿಂದ ತೆರಳುವ ಯಾತ್ರಿಕರನ್ನು ಆನ್‌ಲೈನ್‌ ಮೂಲಕ ಆಯ್ಕೆ ಮಾಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೋರ್ಟ್‌ ಆದೇಶ ಇದೆ ಎಂದು ಸಬೂಬು ಹೇಳಿ ಸಬ್ಸಿಡಿ ನಿಲ್ಲಿಸಿದೆ. ಯಾರೂ ಸಬ್ಸಿಡಿ ನಂಬಿ ಯಾತ್ರೆ ಕೈಗೊಳ್ಳುವುದಿಲ್ಲ. ಹೋಗಬೇಕು ಅಂತ ಇರುವವರು ಯಾತ್ರೆ ಮಾಡಿಯೇ ಮಾಡುತ್ತಾರೆ ಎಂದು ತಿಳಿಸಿದರು. ರಾಜ್ಯದಲ್ಲಿ 18 ಸಾವಿರ ಮಂದಿ ಹಜ್‌ಯಾತ್ರೆಗೆ ತೆರಳಲು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 6624 ಜನರನ್ನು ಪ್ರವಾಸಕ್ಕೆ ಕಳುಹಿಸಲು ಅವಕಾಶವಿದೆ ಎಂದು ತಿಳಿಸಿದರು.

ಧರ್ಮದಲ್ಲಿ ರಾಜಕಾರಣ ಇರಬಾರದು. ನಮ್ಮ ಸ್ವಾರ್ಥಕ್ಕಾಗಿ ಜನಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಹೇಳಿದರು. ನಗರಾಭಿವೃದಿಟಛಿ ಮತ್ತು ಹಜ್‌ ಸಚಿವ ರೋಷನ್‌ ಬೇಗ್‌ ಮಾತನಾಡಿ, ಕೇಂದ್ರ ಸರ್ಕಾರ ಹಜ್‌ ಯಾತ್ರಿಕರಿಗೆ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿದ್ದು ಸ್ವಾಗತಾರ್ಹ. ಹಜ್‌ ಯಾತ್ರಿಕರಿಗೆ ಯಾವುದೇ ಸಹಾಯಧನ ಅಗತ್ಯವಿಲ್ಲ ಎಂದರು.

ಹಜ್‌ ಯಾತ್ರೆಗೆ ಟಿಕೆಟ್‌ ನೀಡಲು ಕೆಲವು ಏಜೆನ್ಸಿಗಳಿಗೆ ಮೀಸಲಿರುವುದರಿಂದ ಅವರು ಯಾತ್ರಿಕರಿಂದ ಹಣ ಲೂಟಿ ಮಾಡುತ್ತಾರೆ. ಅದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಜೊತೆಗೆ ಮಾತುಕತೆ ನಡೆಸಬೇಕು. ಅಲ್ಲದೇ ರಾಜ್ಯದ ಹಜ್‌ ಯಾತ್ರಿಕರ ಕೋಟಾ ಹೆಚ್ಚಳ ಮಾಡುವಂತೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಬೇಕೆಂದು ಮನವಿ ಮಾಡಿದರು. ರಾಜ್ಯಸಭಾ ಸದಸ್ಯ ರೆಹಮಾನ್‌ ಖಾನ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next