Advertisement

ಸೆಲೂನ್‌ಗಳಿಗೆ ಮಂಗಳವಾರ ಬದಲು ರವಿವಾರ ರಜೆ

10:41 PM May 22, 2020 | Sriram |

ಉಡುಪಿ: ಸರಕಾರ ರವಿವಾರ ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸೆಲೂನ್‌ಗಳನ್ನು ಬಂದ್‌ ಮಾಡಬೇಕಾಗಿರುವುದರಿಂದ ಮುಂದೆ ಬರುವ ಮಂಗಳವಾರ ಸೆಲೂನ್‌ಗಳನ್ನು ತೆರೆದು ಕಾರ್ಯ ನಿರ್ವಹಿಸಬಹುದು ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ತಿಳಿಸಿದ್ದಾರೆ.

Advertisement

ಎರಡು ತಿಂಗಳ ಕಾಲ ಲಾಕ್‌ಡೌನ್‌ನಿಂದಾಗಿ ಸೆಲೂನ್‌ಗಳು ಬಂದ್‌ ಆಗಿ ಪುನಃ ಆರಂಭವಾದ ಎರಡು ದಿನಗಳಲ್ಲಿ ಸರಕಾರ ರವಿವಾರ ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಿಸಿರುವುದರಿಂದ ಕ್ಷೌರಿಕ ಬಂಧುಗಳಿಗೆ ಆರ್ಥಿಕ ತೊಂದರೆಯಾಗ ಬಹುದು ಎನ್ನುವ ದೃಷ್ಟಿಯಿಂದ ಜಿಲ್ಲೆಯ ಎಲ್ಲ ತಾಲೂಕಿನ ಸಮಾಜದ ಅಧ್ಯಕ್ಷರೊಂದಿಗೆ ಸಭೆ ನಡೆಸಿ ತೀರ್ಮಾನವನ್ನು ಕೈಗೊಂಡಿರುತ್ತೇವೆ. ಮುಂದಿನ ದಿನಗಳಲ್ಲಿ ಸೆಲೂನ್‌ಗಳನ್ನು ಮಂಗಳವಾರ ತೆರೆದು ರವಿವಾರ ಕಡ್ಡಾಯ ರಜೆ ಮಾಡಬೇಕೆಂಬ ಚಿಂತನೆ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲಿಯಾನ್‌ ಆದಿ ಉಡುಪಿ, ರಾಜ್ಯ ಪ್ರತಿನಿಧಿ ವಿಶ್ವನಾಥ ಭಂಡಾರಿ ನಿಂಜೂರು, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ,ಸವಿತಾ ಸಹಕಾರಿಯ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಹಾಗೂ ಜಿಲ್ಲೆಯ ಏಳು ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷರುಗಳು ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next