Advertisement

ಸಾಮೂಹಿಕ ಕೇಶ ಮುಂಡನ ದೊಡ್ಡ ಮೂರ್ಖತನ: ಮಾತೆ ಮಹಾದೇವಿ

01:31 AM Jan 28, 2019 | |

ವಾಡಿ (ಕಲಬುರಗಿ): ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಪುಣ್ಯಾರಾಧನೆ ಜ.31ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಠದ ಎಂಟು ಸಾವಿರ ವಿದ್ಯಾರ್ಥಿಗಳಿಗೆ ಸವಿತಾ ಸಮಾಜ ವತಿಯಿಂದ ಜ.29ರಂದು ಉಚಿತ ಕೇಶ ಮುಂಡನ ಸೇವೆ ನೀಡುತ್ತಿರುವುದಾಗಿ ಕೊಂಚೂರು ಸವಿತಾ ಮಹರ್ಷಿ ಪೀಠದ ಧರ್ಮಾಧಿಕಾರಿ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಪುಣ್ಯಾರಾಧನೆ ಸಮಯದಲ್ಲಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಲು ಶ್ರೀಮಠದ ಈಗಿನ ಶ್ರೀಸಿದ್ಧಲಿಂಗ ಸ್ವಾಮೀಜಿ ಚಿಂತನೆ ನಡೆಸುತ್ತಿದ್ದಾರೆ ಎಂಬುದನ್ನು ಅರಿತು ಸವಿತಾ ಸಮಾಜದಿಂದ ಶ್ರೀಗಳಿಗೆ ಪತ್ರ ಬರೆಯಲಾಗಿತ್ತು. ಶ್ರೀಗಳು ಅವಕಾಶ ನೀಡಿದರೆ ಮಠದಲ್ಲಿರುವ 8000 ವಿದ್ಯಾರ್ಥಿಗಳಿಗೆ ಸವಿತಾ ಸಮಾಜ ವತಿಯಿಂದ ಉಚಿತ ಕೇಶ ಮುಂಡನ ಮಾಡುವುದಾಗಿ ಮನವಿ ಮಾಡಿದ್ದೆವು. ಇದಕ್ಕೆ ಮರುಪತ್ರ ಬರೆದಿರುವ ಶ್ರೀಗಳು ಕೇಶ ಮುಂಡನೆ ಸೇವೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. 2,000 ಕ್ಷೌರಿಕರು ನಮ್ಮ ಉಪಸ್ಥಿತಿಯಲ್ಲೇ ಮಠದ ಆವರಣದಲ್ಲಿ ಸಾಮೂಹಿಕ ಕೇಶ ಮುಂಡನ ಮಾಡುವ ಮೂಲಕ ಅಳಿಲು ಸೇವೆ ಸಲ್ಲಿಸಲಿದ್ದಾರೆಂದು ವಿವರಿಸಿದರು.

ಮೂರ್ಖತನದ್ದು

ಕೂಡಲಸಂಗಮ: ತುಮಕೂರು ಸಿದ್ಧಗಂಗಾ ಮಠದಲ್ಲಿ ಅಭ್ಯಾಸ ಮಾಡುತ್ತಿರುವ 8 ಸಾವಿರ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೇಶ ಮುಂಡನ ಮಾಡುತ್ತಿರುವುದು ದೊಡ್ಡ ಮೂರ್ಖತನ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ. ಯಾರಾದರೂ ಲಿಂಗೈಕ್ಯರಾದರೆ ಲಿಂಗಾಯತ ಧರ್ಮ ಪ್ರಕಾರ ಅವರ ಹೆಸರಿನಲ್ಲಿ ತಲೆ ಬೋಳಿಸಿಕೊಳ್ಳುವುದು ಇಲ್ಲವೇ ಇಲ್ಲ. ಆದ್ದರಿಂದ ಕಿರಿಯ ಶ್ರೀಗಳು ಇಂತಹ ಮೌಢ್ಯಾಚರಣೆ ಮಾಡಬಾರದು. ಬಸವ ತತ್ವ ಎಂದು ಹೇಳುತ್ತ ಅದರ ವಿರುದ್ಧ ಕೆಲಸ ಮಾಡುತ್ತ ಹೋದರೆ ಹಿರಿಯರಿಗೆ ಅಪಚಾರ ಮಾಡಿದಂತಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next