Advertisement

ವಿಜಯಪುರ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ, ಹಲವೆಡೆ ಹಾನಿ

08:33 PM Apr 15, 2023 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಸಂಜೆ ಭಾರಿ ಗುಡುಗು, ಸಿಡಿಲು ಸಹಿತ ಹಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ.

Advertisement

ತಿಕೋಟಾ ತಾಲೂಕಿನ ಬಾಬಾನಗರ, ಧನ್ಯಾಳ, ಕೊಟ್ಯಾಳ, ದಾಸ್ಯಾಳ, ಬಿಜ್ಜರಗಿ, ಘೋಣಸಗಿ, ಕಳ್ಳಕವಟಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಹುಬನೂರ, ಟಕ್ಕಳಕಿ ಹಾಗೂ ತಿಕೋಟಾ ಪಟ್ಟಣವೂ ಸೇರಿದಂತೆ ಇತರೆ ಕಡೆಗಳಲ್ಲಿ ಗುಡುಗು, ಸಿಡಿಲ ಅಬ್ಬರ ಸಹಿತ ಅಲಿಕಲ್ಲು ಮಳೆಯಾಗಿದೆ.

ಬಿರುಗಾಳಿ ಸಹಿತ ಸುರಿದ ಮಳೆಯ ಅಬ್ಬರಕ್ಕೆ ಕೆಲವು ಕಡೆಗಳಲ್ಲಿ ತಗಡಿನ‌ ಶೆಡ್ ಗಳು ಹಾನಿಗೀಡಾಗಿದ್ದು, ಕೊಯ್ಲಿನ‌ ಹಂತದಲ್ಲಿ ಇರುವ ದ್ರಾಕ್ಷಿ ಬೆಳೆ ಹಾನಿಗೆ ಸಿಲುಕಿದೆ.

ಇದನ್ನೂ ಓದಿ: ಕೊಪ್ಪಳ BJP ಟಿಕೆಟ್ ಗೆ ಪಟ್ಟು!: ಸಂಸದ ಸಂಗಣ್ಣ ಕರಡಿ ಬಂಡಾಯ ಸಾಧ್ಯತೆ?

Advertisement

Udayavani is now on Telegram. Click here to join our channel and stay updated with the latest news.

Next