Advertisement

ಎಚ್‌1ಎನ್‌1: ಬಂಟ್ವಾಳದ ಯುವಕ ಸಾವು

12:04 PM Mar 06, 2017 | Team Udayavani |

ಬಂಟ್ವಾಳ: ಉಳಿ ಗ್ರಾಮದ ಕಕ್ಯೆಪದವು ಪುಣೆದಡಿ ಗೋಪಾಲ ಭಂಡಾರಿ ಅವರ ಪುತ್ರ ಅನೂಪ್‌ ಕುಮಾರ್‌ (33) ಕಕ್ಯೆಪದವು ಎಚ್‌1ಎನ್‌1 ಜ್ವರದಿಂದ ರವಿವಾರ ಮೃತಪಟ್ಟಿದ್ದಾರೆ.

Advertisement

ಬೆಂಗಳೂರಿನ ಹೆಬ್ಟಾಳದ ಖಾಸಗಿ ಸಂಸ್ಥೆಯೊಂದರಲ್ಲಿ ಕಳೆದ 10 ವರ್ಷಗಳಿಂದ ತಾಂತ್ರಿಕ ಅಧಿಕಾರಿಯಾಗಿದ್ದ ಅವರು ಕೆಲವು ಸಮಯದಿಂದ ಜ್ವರದಿಂದ ಬಳಲುತ್ತಿದ್ದು, ಹೆಬ್ಟಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರವಿವಾರ ಸಂಜೆ ಅವರು ಮೃತಪಟ್ಟರು. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಅವರು ಬೆಂಗಳೂರು ಭಂಡಾರಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 
ಕಕ್ಕೆಪದವಿನಲ್ಲಿ ಜೈತುಳುನಾಡು ಪುಣೆದಡಿ ಸಂಘವನ್ನು ಸ್ಥಾಪಿಸಿದ್ದ ಅವರು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next