Advertisement

ಗೆಳೆಯರು ನನ್ನನ್ನು ಒಂಟಿ ಮಾಡಿದರು: ವಿಶ್ವನಾಥ್‌

01:06 AM Jan 24, 2021 | Team Udayavani |

ಚಿತ್ರದುರ್ಗ: ಯಾರಿಗೆ ಗಟ್ಟಿ ಧ್ವನಿ ಇರುತ್ತದೋ ಅವರು ಒಂಟಿಯಾಗುತ್ತಾರೆ. ಗೆಳೆಯರೂ ನನ್ನನ್ನು ಒಂಟಿ ಮಾಡಿ ಹೋದರು. ಆದರೆ ನಾನು ಒಂಟಿ ಅಲ್ಲ, ರಾಜ್ಯದ ಜನ ನನ್ನ ಜತೆಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,  ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುವವನು. ಮಂತ್ರಿಗಿರಿ ಸಿಗುತ್ತೂ ಬಿಡುತ್ತೋ. ಆದರೆ ನಾನು ರಾಜ್ಯದ ಸಾಕ್ಷಿಪ್ರಜ್ಞೆಯಾಗಿರುವೆ. 17 ಜನರ ಟೀಮ್‌ ಮುನ್ನಡೆಸಿದವನೇ ನಾನು ಎಂದು ಹೇಳಿದರು.

ವಿಶ್ವನಾಥ್‌ ಒಂಟಿಯಲ್ಲ :

ಮೈಸೂರು: ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಒಬ್ಬಂಟಿಯಲ್ಲ. ಅವರ ಜೊತೆಗೆ ನಾವೆಲ್ಲರೂ ಇದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು. ಅವರು  ಒಂಟಿ ಎಂದು ಯಾಕೆ ಹೇಳಿದರೋ ಗೊತ್ತಿಲ್ಲ. ಈ ಬಗ್ಗೆ   ಅವರ ಜತೆ ಮಾತನಾಡುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next