Advertisement

ದಿ. ದೇವರಾಜ ಅರಸ್ ಹೆಸರು ಅಜರಾಮರಗೊಳಿಸಲು ಹುಣಸೂರು ಜಿಲ್ಲೆ ಆಗಲೇಬೇಕು: ಎಚ್. ವಿಶ್ವನಾಥ್

12:35 PM May 13, 2020 | sudhir |

ಮೈಸೂರು: ಮಾಜಿ ಮುಖ್ಯಮಂತ್ರಿ ದಿವಂಗತ. ದೇವರಾಜ ಅರಸ್ ಅವರ ಹೆಸರನ್ನು ಅಜರಾಮರಗೊಳಿಸಲು ಹುಣಸೂರು ಜಿಲ್ಲೆ ಆಗಲೇಬೇಕು ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.

Advertisement

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹುಣಸೂರು ಜಿಲ್ಲೆ ಆಗಲೇಬೇಕು ಇದಕ್ಕಾಗಿ ಉನ್ನತ ಹೋರಾಟ ಸಮಿತಿಯನ್ನೂ ರಚನೆ ಮಾಡುತ್ತೇವೆ ಜೊತೆಗೆ ಯಾಕಾಗಿ ಜಿಲ್ಲೆ ಆಗಬೇಕೂಂತ ಜನರಲ್ಲಿ ಅಭಿಪ್ರಾಯ ಮೂಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಗೆದ್ದವರು ಮಾತ್ರ ಜನರಿಗೆ ಉತ್ತರದಾಯಿತ್ವವೇ, ಸೋತವರು ಜನಪರ ಹೋರಾಟ ಮಾಡುವಂತಿಲ್ಲವೇ ವಕೀಲ, ಶಾಸಕ, ಸಚಿವ, ಸಂಸದನಾಗಿ ನನಗೆ ಅನುಭವವಿದೆ.

ನಾನು ಯಾರು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡೋಕೆ ಅಂತಾ ಸಾ.ರಾ.ಮಹೇಶ್ ಪ್ರಶ್ನೆ ಮಾಡಿದ್ದಾರೆ ಹಾಗಾದರೆ ಕೆ.ಆರ್. ನಗರದ ಸಾಲಿಗ್ರಾಮ ಪ್ರತ್ಯೇಕ ತಾಲೂಕಿಗೆ ಯಾಕೆ ಶಿಫಾರಸು ಮಾಡಿದಿರಿ ಎಂದು ತಿರುಗೇಟು ನೀಡಿದರು.

ಮೈಸೂರು ಜಿಲ್ಲೆ ಭೌಗೋಳಿಕವಾಗಿ ವಿಶಾಲವಾಗಿದೆ ಆಡಳಿತ ಚುರುಕಾಗಿಸಲು ಹುಣಸೂರು ಜಿಲ್ಲೆ ಮಾಡಬೇಕಾಗಿದೆ ಇಂತಹ ಪ್ರಯತ್ನಕ್ಕೆ ಮಾಜಿ ಸಚಿವರಾದ ನೀವು ಸಹಕಾರ ಕೊಡಬೇಕು ಎಂದು ಸಾ.ರಾ. ಮಹೇಶ್ ಗೆ ಎಚ್. ವಿಶ್ವನಾಥ್ ಟಾಂಗ್ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next