Advertisement

ದೇವೇಗೌಡರನ್ನು ಕರೆಸಿ ಆಣೆ ಮಾಡಿಸ್ತಾರಾ.?: ಎಚ್ ಡಿಕೆಗೆ ಬಾಲಕೃಷ್ಣ ತಿರುಗೇಟು

04:12 PM Oct 27, 2023 | Team Udayavani |

ರಾಮನಗರ: ” ಏಯ್..ಥೂ.. ಅವರ ಬಾಲಿಷ ಹೇಳಿಕೆಗೆ ಉತ್ತರ ಕೊಡಲ್ಲ ನಡಿಯಪ್ಪಾ.! ಅದೇನ್ ಮಾಜಿ ಸಿಎಂ ಆಗಿ ಚಿಲ್ಲರೆ ತರ ಮಾತನಾಡ್ತಾರೆ. ಸರಿಯಾಗಿ ತೂಕವಾಗಿ ಮಾತನಾಡಲು ಹೇಳಿ..” ಇದು  ಸಿಎಂ, ಡಿಸಿಎಂ ಹಾಗೂ ಸಚಿವರು ಐದು ತಿಂಗಳಿಂದ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎಂಬ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಗಡಿ ಶಾಸಕ ಹೆಚ್. ಸಿ.ಬಾಲಕೃಷ್ಣ ಪ್ರತಿಕ್ರಿಯೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ಕರೆಸಿ ಆಣೆ ಮಾಡಿಸುತ್ತಾರಾ ಕೇಳಿ? ದೇವೇಗೌಡರು ದುಡ್ಡು ತಿಂದಿಲ್ಲವೆಂದು ಬಂದು ಪ್ರಮಾಣ ಮಾಡ್ತಾರಾ.? ಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು ಎಂದರು.

“ಸರಿ ನಾವೆಲ್ಲಾ ಕಳ್ಳರೇ.. ಒಪ್ಕೊತೀವಿ, ನಾವೆಲ್ಲಾ ತಿಂದಿದ್ದೀವಿ.! ಹಾಗಿದ್ದರೆ ನಾನು ಸತ್ಯ ಹರಿಶ್ಚಂದ್ರ, ನಾವೇನು ತಿಂದಿಲ್ಲ ಎಂದು ಬಂದು ಆಣೆ ಮಾಡಿ. ನೀವ್ ಬಂದು ಆಣೆ ಮಾಡಿ ಅಂದರೆ ಅವರನ್ನು ಕರೆಯಿರಿ, ಇವರನ್ನು ಕರೆಯಿರಿ ಎನ್ನುವುದಲ್ಲ. ನೀವು ಮೋದಿ ಕರೆಯಿರಿ ಅಂದರೆ ಕರೆಯೋಕಾಗುತ್ತಾ? ನಾನು ಹೇಳಿರೋದು ನಿಮ್ಮ ಕುಟುಂಬದವರು ತಿಂದಿಲ್ವಾ? ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿ ಮಾತನಾಡಬಾರದು ಎಂದರು.

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಮರುನಾಮಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮರುನಾಮಕರಣ ಮಾಡಿದರೆ ಏನಾಗುತ್ತದೆ? ಉಪವಾಸ ಮಾಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಸುಮ್ಮನೆ ಏನೇನೋ ಮಾತನಾಡ್ತಾರೆ ಬಿಡಿ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next