Advertisement

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

11:37 PM Sep 24, 2024 | Team Udayavani |

ಗ್ವಾಲಿಯರ್‌: ಬಾಂಗ್ಲಾದೇಶ ವಿರುದ್ಧ ಅ. 6ರಂದು ಗ್ವಾಲಿಯರ್‌ನಲ್ಲಿ ನಡೆಯುವ ಟಿ20 ಅಂತಾರಾಷ್ಟ್ರೀಯ ಪಂದ್ಯವೀಗ ಇಕ್ಕಟ್ಟಿಗೆ ಸಿಲುಕಿದೆ. ಬಾಂಗ್ಲಾದೇಶಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವ ಕಾರಣವನ್ನು ಮುಂದಿಟ್ಟು ಮಧ್ಯಪ್ರದೇಶದ ಹಿಂದೂ ಮಹಾಸಭಾ ಘಟಕ ಗ್ವಾಲಿಯರ್‌ ಬಂದ್‌ಗೆ ಕರೆಯಿತ್ತಿದೆ.

Advertisement

“ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಆ ದೇಶದ ವಿರುದ್ಧ ಕ್ರಿಕೆಟ್‌ ಆಡಲು ಇದು ಸೂಕ್ತ ಸಮಯವಲ್ಲ. ಈ ಪಂದ್ಯ ವನ್ನು ನಾವು ವಿರೋಧಿಸುತ್ತೇವೆ. ಅಂದು ಗ್ವಾಲಿಯರ್‌ ಬಂದ್‌ ನಡೆಸಿ ಪ್ರತಿಭಟನೆ ನಡೆಸಲಿದ್ದೇವೆ. ಆದರೆ ಅಗತ್ಯ ವಸ್ತುಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ’ ಎಂಬುದಾಗಿ ಹಿಂದೂ ಮಹಾಸಭಾದ ಉಪಾಧ್ಯಕ್ಷ ಜೈವೀರ್‌ ಭಾರದ್ವಾಜ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next