Advertisement

Guttigaru ಕುಡುಕರನ್ನು ಓಡಿಸಲು ಕುಡಿದೇ ಬಂದ ಪೊಲೀಸರು!

01:16 AM Jul 12, 2024 | Team Udayavani |

ಗುತ್ತಿಗಾರು: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡು ತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೊಲೀಸರೇ ಮದ್ಯ ಸೇವಿಸಿದ್ದರು ಎಂದು ಸಾರ್ವಜನಿಕರಿಗೆ ಅನುಮಾನ ಬಂದು ಅವರನ್ನು ಪ್ರಶ್ನಿಸಿದ ಘಟನೆ ಬುಧವಾರ ನಡೆದಿದೆ. ಸದ್ಯ ಈ ವೀಡಿಯೋ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ.

Advertisement

ಗುತ್ತಿಗಾರು ಬಸ್‌ ನಿಲ್ದಾಣದಲ್ಲಿ ಕೆಲವು ವ್ಯಕ್ತಿಗಳು ಮದ್ಯ ಸೇವಿಸಿದ್ದಲ್ಲದೆ ಬಾಟಲಿಗಳನ್ನು ಒಡೆದು ಚೂರುಗಳನ್ನು ಚೆಲ್ಲಿದ್ದರು. ಬಳಿಕ ಅಲ್ಲೇ ಮಲಗಿ ಸಾರ್ವಜನಿಕರಿಗೂ ತೊಂದರೆ ನೀಡುತ್ತಿದ್ದರು. ಅವರಿಂದ ತೊಂದರೆ ಆಗುತ್ತಿದೆ ಎಂದು ಮಹಿಳೆಯೊಬ್ಬರು ತುರ್ತು ಸಹಾಯವಾಣಿ 112ಕ್ಕೆ ಕರೆಮಾಡಿ ತಿಳಿಸಿದ್ದರು.

ಕರೆಯ ಆಧಾರದಲ್ಲಿ ಹೊಯ್ಸಳ ಪೊಲೀಸರನ್ನು ಸ್ಥಳಕ್ಕೆ ಕಳಿಸಲಾಗಿತ್ತು. ಅವರ ವರ್ತನೆಯಿಂದ ಅವರೇ ಮದ್ಯ ಸೇವಿಸಿದ್ದರು ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದ್ದು, ಮೊಬೈಲ್‌ನಲ್ಲಿ ಅವರ ಚಲನವಲನವನ್ನು ಸೆರೆಹಿಡಿದಿದರು. ಇನ್ನು ಕೆಲವರು ನೇರವಾಗಿ ಪೊಲೀಸರನ್ನೇ ಪ್ರಶ್ನಿಸಿದರು. ಜತೆಗೆ “ಕುಡಿದು ವಾಹನ ಚಲಾಯಿಸಬೇಡಿ’ ಎಂದು ಬುದ್ಧಿ ಮಾತನ್ನೂ ಹೇಳಿದರು. ಅವೆಲ್ಲವೂ ವೀಡಿಯೋದಲ್ಲಿ ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next