Advertisement

ಗುರುವಂದನೆ ಮತ್ತು  ಶ್ರೀನಿವಾಸ ಕಲ್ಯಾಣೋತ್ಸವದ ಪೂರ್ವಭಾವಿ ಸಭೆ

01:57 PM Sep 12, 2017 | |

ಮುಂಬಯಿ:ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ವತಿಯಿಂದ ಬಾಕೂìರು ಭಾರ್ಗವ ಬೀಡು ಶ್ರೀ ಸಂಸ್ಥಾನದ ವಿದ್ಯಾವಾಚಸ್ಪತಿ ಶ್ರೀ ಡಾ| ಸಂತೋಷ್‌ ಗುರೂಜೀ ಅವರ ಗುರುವಂದನ ಕಾರ್ಯಕ್ರಮದ ಅಂಗವಾಗಿ ಶ್ರೀನಿವಾಸ ಕಲ್ಯಾಣೋತ್ಸವವು ಅ. 7ರಂದು ಬಂಟರ ಭವನದಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ  ಜರಗಲಿದ್ದು, ಇದರ  ಪೂರ್ವಭಾವಿ ಸಭೆಯು  ಸೆ. 7 ರಂದು ಪೊವಾಯಿಯ ಹೊಟೇಲ್‌ ಮಂತ್ರ ಸಭಾಗೃಹದಲ್ಲಿ ಜರಗಿತು.

Advertisement

ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಅಧ್ಯಕ್ಷ, ಬಾಕೂìರು ಶ್ರೀ ಸಂಸ್ಥಾನದ ಟ್ರಸ್ಟಿ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಈ ಸಮಾರಂಭದ ಯಶಸ್ಸಿಗಾಗಿ ಚರ್ಚಿಸಿ, ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾಗಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರನ್ನು ಹಾಗೂ ಸಂಪೂರ್ಣ ಕಾರ್ಯಕ್ರಮದ ಮೇಲ್ವಿಚಾರಕರನ್ನಾಗಿ ಡಾ| ಸತ್ಯಪ್ರಕಾಶ್‌ ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ, ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಮಹಾಪೋಷಕ ಕೆ. ಎಂ. ಶೆಟ್ಟಿ, ವಿಶ್ವಸ್ತ ಬಾಕೂìರು ಸುಧಾಕರ ಶೆಟ್ಟಿ, ಸಭಾ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಉಪಾಧ್ಯಕ್ಷ ಭಾಸ್ಕರ ಎಂ. ಶೆಟ್ಟಿ, ಸಂಚಾಲಕ ಸಿಎ ಕರುಣಾಕರ ಶೆಟ್ಟಿ ಹಾಗೂವೇಣುಗೋಪಾಲ್‌ ಶೆಟ್ಟಿ ಅವರನ್ನು ನೇಮಕ ಮಾಡಲಾಯಿತು.

ಪೂಜಾ ಸಮಿತಿಯ ಮೇಲ್ವಿಚಾರಕರಾಗಿ ಸೀತಾ ರಾಮ ಜೆ. ಶೆಟ್ಟಿ, ಡಾ| ಸತ್ಯಾ ಶೆಟ್ಟಿ, ಕ್ಯಾಟರಿಂಗ್‌ ಸಮಿತಿಯ ಮೇಲ್ವಿಚಾರಕರಾಗಿ ಉದ್ಯಮಿಗಳಾದ ಅಪ್ಪಣ್ಣ ಶೆಟ್ಟಿ, ಮುಲುಂಡ್‌ ಬಂಟ್ಸ್‌ನ ಕಾರ್ಯದರ್ಶಿ ಉದಯ ಎನ್‌. ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಬಾನ್ಸುರಿ ರತ್ನಾಕರ ಶೆಟ್ಟಿ ಅವರು ಆಯ್ಕೆಯಾದರು.

ಪ್ರಿಂಟಿಂಗ್‌ ಸಮಿತಿಯ ಮೇಲ್ವಿಚಾರಕರಾಗಿ ಬೋಂಬೆ ಬಂಟ್ಸ್‌ನ ಮಾಜಿ ಅಧ್ಯಕ್ಷ ನ್ಯಾಯವಾದಿ ರತ್ನಾಕರ ಶೆಟ್ಟಿ, ಶ್ರೀಧರ ಶೆಟ್ಟಿ, ಪ್ರಚಾರ ಸಮಿತಿಯ ಮೇಲ್ವಿಚಾರಕರಾಗಿ ಮುಲುಂಡ್‌ ಬಂಟ್ಸ್‌ನ ಮಾಜಿ ಅಧ್ಯಕ್ಷ ಎಸ್‌. ಬಿ. ಶೆಟ್ಟಿ, ಉದ್ಯಮಿ ರಮೇಶ್‌ ಶೆಟ್ಟಿ, ಜಯಪ್ರಕಾಶ್‌ ಶೆಟ್ಟಿ, ಎನ್‌. ಸಿ. ಶೆಟ್ಟಿ, ಡಿ. ಕೆ. ಶೆಟ್ಟಿ, ಹಣ್ಣು-ಹಂಪಲು ಸಮಿತಿಯ ಮೇಲ್ವಿಚಾರಕರಾಗಿ ಚಿತ್ತರಂಜನ್‌ ಶೆಟ್ಟಿ ಅವರನ್ನು ನೇಮಿಸಲಾಯಿತು.
ಅ. 7ರಂದು ಶ್ರೀ ಸಂತೋಷ್‌ ಗುರೂಜಿ ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ 9.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯನ್ನು ಆಯೋಜಿ ಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ವಾಗಿ ಪೆರ್ಡೂರು ಮೇಳದ ಕಲಾವಿದರಿಂದ ಬಾಕೂìರು ಕ್ಷೇತ್ರ ಮಹಾತೆ¾ ಯಕ್ಷಗಾನ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಲಿದೆ ಎಂದು  ಇದೇ ಸಂದರ್ಭ ತಿಳಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ವಿವಿಧ ಸ್ಥಳೀಯ ಸಮಿತಿ ಗಳ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು ಉಪಸ್ಥಿತ ರಿದ್ದರು. 

ಮುಂಬಯಿಯಲ್ಲಿ ನಡೆಯ ಲಿರುವ ಅಪರೂಪದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿ
ಸುವಂತೆ ಡಾ| ಸತ್ಯ ಪ್ರಕಾಶ್‌ ಶೆಟ್ಟಿ ಅವರು ವಿನಂತಿಸಿದರು. ಈ ಧಾರ್ಮಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಯಶಸ್ವಿ ಗೊಳಿಸಲು ನಾವೆಲ್ಲರೂ ಒಮ್ಮತದಿಂದ ಕಾರ್ಯಪ್ರವೃತ್ತರಾಗೋಣ ಎಂದು ಸಿಎ ಶಂಕರ್‌ ಬಿ. ಶೆಟ್ಟಿ ಅವರು ನುಡಿದರು. ವೇದಿಕೆಯಲ್ಲಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಗೌರವಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ, ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಸಂಚಾಲಕ ಸಿಎ ಕರುಣಾಕರ ಶೆಟ್ಟಿ, ಮಹಾಪೋಷಕ ಕೆ. ಎಂ. ಶೆಟ್ಟಿ, ವಿಶ್ವಸ್ಥ ಬಾಕೂìರು ಸುಧಾಕರ ಶೆಟ್ಟಿ, ಕೋಶಾಧಿಕಾರಿ ಶಾಂತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next