Advertisement

ತಾಯಿಗೆ ಬೈದದ್ದೇ ಕೊಲೆಗೆ ಕಾರಣವಾಯ್ತೇ?

10:09 AM Jul 31, 2018 | Team Udayavani |

ಉಡುಪಿ: ಮಣಿಪಾಲದಲ್ಲಿ ರವಿವಾರ ನಡೆದ ಗುರುಪ್ರಸಾದ್‌ ಭಟ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  24 ಗಂಟೆಯೊಳಗೆ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ಸದ್ಯ ಮೂರು ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಿದ್ದು, ವಿಚಾರಣೆ ನಡೆಯುತ್ತಿದೆ. ರವಿವಾರ ಸಂಜೆ ಮೂವರು ಆರೋಪಿಗಳಾದ ಸುಜೀತ್‌ ಪಿಂಟೋ, ರಾಜೇಶ್‌ ಮತ್ತು ಪ್ರದೀಪ್‌ ಅವರನ್ನು ಕುಂದಾಪುರ ಸಮೀಪದ ಕಂಡೂರು ಸೇತುವೆ ಮೇಲೆ ಸಿನಿಮೀಯ ರೀತಿಯಲ್ಲಿ ಕಂಡೂರು ಪಿಎಸ್‌ಐ ಶ್ರೀಧರ್‌ ನಾಯಕ್‌ ನೇತೃತ್ವದಲ್ಲಿ ಬಂಧಿಸಿದ ಪೊಲೀಸರು ಮಣಿಪಾಲ ಠಾಣೆಗೆ ಹಸ್ತಾಂತರಿಸಿದ್ದರು. ಮತ್ತೂಬ್ಬ ಆರೋಪಿ ರಂಜಿತ್‌ ಪಿಂಟೋ ತಲೆಮರೆಸಿಕೊಂಡಿದ್ದ. ಆತನನ್ನೂ ಖಚಿತ ಮಾಹಿತಿ ಮೇರೆಗೆ ರವಿವಾರ ಮಧ್ಯರಾತ್ರಿ ಕೊಳಲಗಿರಿಯಲ್ಲಿ ಬಂಧಿಸಿದ್ದಾರೆ. 

Advertisement

ಶನಿವಾರ ರಾತ್ರಿ ಗುರುರಾಜ್‌ ಭಟ್‌ ಮತ್ತು ಆರೋಪಿಗಳಲ್ಲೊಬ್ಬನಾದ ರಂಜಿತ್‌ ಪಿಂಟೋ ನಡುವೆ ಹಣಕಾಸಿನ ವಿಚಾರವಾಗಿ ತೀವ್ರ ಮಾತುಕತೆ ನಡೆದಿತ್ತೆನ್ನಲಾಗಿದ್ದು. ಈ ಸಂದರ್ಭ ಮೃತ ಗುರುರಾಜ್‌ ಭಟ್‌, ರಂಜಿತ್‌ ತಾಯಿ ಕುರಿತು ಅವಾಚ್ಯವಾಗಿ ನಿಂದಿಸಿದ ಎನ್ನಲಾಗಿದೆ. ಇದು ಗುರುರಾಜ್‌ ಭಟ್‌ ಕೊಲೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ವಿಚಾರಣೆಯಿಂದ ತಿಳಿಯಬೇಕಿವೆ.

Advertisement

Udayavani is now on Telegram. Click here to join our channel and stay updated with the latest news.

Next