Advertisement

Gundlupete: ಸಾಲಬಾಧೆ ರೈತ ನೇಣಿಗೆ ಶರಣು

02:34 PM Aug 12, 2024 | Team Udayavani |

ಗುಂಡ್ಲುಪೇಟೆ: ಸಾಲದ ಸುಳಿಗೆ ಸಿಲುಕಿ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಡಿ‌.ಹೊಸಪುರ ಗ್ರಾಮದಲ್ಲಿ ನಡೆದಿದೆ.

Advertisement

ಡಿ.ಹೊಸಪುರ ಗ್ರಾಮದ ಶಿವಣ್ಣೇಗೌಡ(50) ಆತ್ಮಹತ್ಯೆಗೆ ಶರಣಾದ ರೈತ. ಈತ ನಾಲ್ಕು ಎಕರೆ ಜಮೀನಿನಲ್ಲಿ ಸಣ್ಣ ಈರುಳ್ಳಿ ಬೆಳೆದಿದ್ದು ನಿರಂತರ ಮಳೆಯಿಂದ ಸಣ್ಣ ಈರುಳ್ಳಿ ಬೆಲೆ ಕುಸಿತವಾದ ಕಾರಣ ಲಕ್ಷಾಂತರ ರೂಪಾಯಿ ‌ನಷ್ಟ ಉಂಟಾಗಿತ್ತು. ಜೊತೆಗೆ ಟ್ರ್ಯಾಕ್ಟರ್ ಸಾಲವನ್ನು ಮಾಡಿಕೊಂಡಿದ್ದ ಎನ್ನಲಾಗುತಿದ್ದು, ಸಾಲದ ಸುಳಿಗೆ ‌ಸಿಲುಕಿ ತೀವ್ರ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ‌ರವಾನಿಸಲಾಗಿದೆ. ಈ ಸಂಬಂಧ ‌ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next