Advertisement

Gundlupete: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ

07:57 PM Sep 11, 2024 | Team Udayavani |

ಗುಂಡ್ಲುಪೇಟೆ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಮರಹಳ್ಳಿ ಕೆರೆಯಲ್ಲಿ ನಡೆದಿದೆ.

Advertisement

ತಾಲೂಕಿನ ಬೇಗೂರಿನ‌ ಸದಾನಂದಸ್ವಾಮಿ (45) ಮೃತ ದುರ್ದೈವಿ. ಸದಾನಂದಸ್ವಾಮಿ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕವಾಗಿ ಖಿನ್ನರಾಗಿದ್ದರು. ಮಂಗಳವಾರದಿಂದ ಕಾಣೆಯಾಗಿದ್ದರು‌. ಕೆರೆ ದಂಡೆಯಲ್ಲಿ ಚಪ್ಪಲಿಗಳು ಸಿಕ್ಕಿದ ಬಳಿಕ ಶೋಧ ಕಾರ್ಯ ನಡೆಸಿ ಶವ ಮೇಲಕ್ಕೆತ್ತಲಾಗಿದೆ.

ಮೃತರ ಸಹೋದರಿ ಬೇಗೂರು ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next