Advertisement

ಬೋಗಿ-ಎಂಜಿನ್ ಸಂಪರ್ಕ ಕಡಿತಗೊಂಡು ಆತಂಕ ಸೃಷ್ಟಿಸಿದ ಗುಂಬಜ್ ಎಕ್ಷಪ್ರೆಸ್ ರೈಲು

05:59 PM Dec 14, 2021 | Team Udayavani |

ವಿಜಯಪುರ: ಎರಡು ಬೋಗಿ ಹಾಗೂ ಎಂಜಿನ್ ಮಧ್ಯೆ ಸಂಪರ್ಕ ಕಡಿತವಾಗಿ ರೈಲು ಪ್ರಯಾಣಿಕರಲ್ಲಿ ಆತಂಕ ಸೃಷ್ಡಿಸಿದ ಘಟನೆ ನಗರದಲ್ಲಿ ಜರುಗಿದೆ.

Advertisement

ವಿಜಯಪುರ ‌ನಗರದ ವಜ್ರಹನುಮಾನ ದೇವಸ್ಥಾನದ ಬಳಿ ರೈಲು ಮಾರ್ಗದಲ್ಲಿ ಎರಡು ಬೋಗಿಗಳ ಸಂಪರ್ಕ ಕಡಿತವಾಗಿ, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು.

ವಿಜಯಪುರ ಮಾರ್ಗವಾಗಿ ಮೈಸೂರಿಗೆ ತೆರಳುವ ಗೋಲಗುಂಬಜ್ ಎಕ್ಸಪ್ರೆಸ್ ರೈಲಿನಲ್ಲಿ ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.

ನಗರದ ಮಧ್ಯ ಭಾಗದಲ್ಲಿ ರೈಲು ಮಾರ್ಗವಿದ್ದು, ವಜ್ರಹನುಮಾನ್ ಮಂದಿರದ ಬಳಿ ಎರಡು ಬೋಗಿಗಳು ಎಂಜಿನಿಂದ ಸಂಪರ್ಕ‌ ಕಡಿದುಕೊಂಡಿವೆ.

ಇದರಿಂದ ಸಂಪರ್ಕ ಕಡಿತಗೊಂಡ ಬೋಗಿಗಳು ದೂರಕ್ಕೆ ಹೋಗಿ ನಿಲ್ಲುತ್ತಲೇ ಪ್ರಯಾಣಿರು ಚೀರಾಟ ಆರಂಭಿಸಿದ್ದಾರೆ. ಕೂಡಲೇ ರೈಲು ಚಾಲಕ ಎಚ್ಚೆತ್ತು ರೈಲು ನಿಲ್ಲಿಸಿದ್ದಾನೆ.

Advertisement

ರೈಲು ಎಂಜಿನಿಂದ ಎರಡು ಬೋಗಿಗಳು ಸಂಪರ್ಕ ಕಡಿತವಾಗುತ್ತಲೇ ರೈಲಿನಲ್ಲಿದ ಪ್ರಯಾಣಿಕರು ಗಾಬರಿಯಿಂದ ಚೀರಾಟ ಆರಂಭಿಸಿದ್ದಾರೆ.

ಎರಡು ಬೋಗಿಗಳ ಮಧ್ಯೆ ಇದ್ದ ಸಂಪರ್ಕದ ಕೊಂಡಿ ಕಳಚಿ ಬಿದ್ದಿದ್ದೇ ಈ ಘಟನೆಗೆ ಕಾರಣ ಎಂದು ಅಧಿಕಾರಿಗಳ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.

ಬಳಿಕ ಕಡಿತವಾಗಿದ್ದ ಬೋಗಿ -ಎಂಜಿನ್  ಮಧ್ಯೆ ಹೊಸ ಕೊಂಡಿ ಹಾಕಿ ದುರಸ್ಥಿ ಮಾಡಿದ ಬಳಿಕ ರೈಲು ಪ್ರಯಾಣ‌ ಮುಂದುವರೆಸಿದೆ.

ದುರಸ್ಥಿವರೆಗೂ ರೈಲು ಸಂಚಾರ ಬಂದ್ ಆಗಿತ್ತು. ಸಂಪರ್ಕ ಕಡಿಕೊಂಡ‌ ಬೋಗಿಗಳನ್ನು ವೀಕ್ಷಿಸಲು ನಗರದ ಜನರು ಕುತೂಹಲದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ಘಟನೆ ಸುದ್ದಿ ತಿಳಿಯುತ್ತಲೇ ವಿಜಯಪುರ ರೇಲ್ವೆ‌ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next