Advertisement

ಗುಳ್ಳಾಡಿ: ಗೂಳಿ ತಿವಿದು ರೈತ ಸಾವು

11:01 AM Oct 19, 2019 | Sriram |

ತೆಕ್ಕಟ್ಟೆ: ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುಳ್ಳಾಡಿ ಎಂಬಲ್ಲಿ ತಾನು ಸಾಕಿದ ಎತ್ತು ಮಾಲಕನನ್ನೇ ತಿವಿದು ಕೊಂದ ಘಟನೆ ಅ. 18ರ ಮಧ್ಯಾಹ್ನ ಸಂಭವಿಸಿದೆ.

Advertisement

ಹಿರಿಯ ಸಾವಯವ ಕೃಷಿಕ ಗುಳ್ಳಾಡಿ ಪದ್ಮನಾಭ ಭಟ್‌ (70) ಅವರು ಹಲವು ವರ್ಷಗಳಿಂದ ಕೃಷಿ ಹಾಗೂ ಹೈನುಗಾರಿಕೆ ಮಾಡುತ್ತಿದ್ದರು.ಅವರು ಕೃಷಿ ಅಗತ್ಯಕ್ಕಾಗಿ ಒಂದು ಎತ್ತನ್ನು ಕೂಡ ಸಾಕಿದರು.


ಶುಕ್ರವಾರ ಮಧ್ಯಾಹ್ನ ಈ ಹೋರಿಗೆ ಏಕಾಏಕಿ ಮದವೇರಿದ್ದು, ಅದು ಪದ್ಮನಾಭ ಭಟ್ಟರಿಗೆ ತಿವಿಯಿತು. ಪರಿಣಾಮ ಗಂಭೀರ ಗಾಯಗೊಂಡ ಭಟ್ಟರನ್ನು ತತ್‌ಕ್ಷಣವೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next