Advertisement

ರಾಜಸ್ಥಾನ: ಕೋಟಾ ಆಗ್ರಹಿಸಿ ಮುಂದುವರಿದ ಗುಜ್ಜರ್‌ ಧರಣಿ,ರೈಲು ತಡೆ

11:33 AM Feb 09, 2019 | Team Udayavani |

ಜೈಪುರ : ಗುಜ್ಜರ್‌ ಮತ್ತು ಇತರ ಸಮುದಾಯದವರು ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ತಮಗೆ ಶೇ.5ರ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಇಂದು ನಿರಂತರ ಎರಡನೇ ದಿನವೂ ತಮ್ಮ ರೈಲ್‌ ರೋಕೋ ಚಳವಳಿಯನ್ನು ನಡೆಸಿದ್ದಾರೆ. 

Advertisement

ರಾಜಸ್ಥಾನದ ಸವಾಯ್‌ ಮಾಧೋಪುರ ಜಿಲ್ಲೆಯಲ್ಲಿ ಗುಜ್ಜರ್‌ ನಾಯಕ ಕಿರೋರಿ ಸಿಂಗ್‌ ಬೈನ್‌ಸ್ಲಾ ಮತ್ತು ಆತನ ಬೆಂಬಲಿಗರು ರೈಲು ಹಳಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಕಾರಣ ಮೂರು ರೈಲುಗಳನ್ನು ರದ್ದುಪಡಿಸಬೇಕಾಯಿತು ಮತ್ತು ಒಂದು ರೈಲಿನ ಮಾರ್ಗ ಬದಲಿಸಬೇಕಾಯಿತು. ಕೋಟಾ ವಿಭಾಗದ ಸವಾಯ್‌ ಮಾಧೋಪುರ – ಬಯಾನಾ ರೈಲ್ವೆ ಸೆಕ್ಷನ್‌ ನಲ್ಲಿ ರೈಲುಗಳ ಓಡಾಟ ತೀವ್ರವಾಗಿ ಬಾಧಿತವಾಯಿತು. 

ಗುಜ್ಜರ್‌, ರೈಕಾ ರೇಬಾರಿ, ಗಾದಿಯಾ ಲೂಹಾರ್‌, ಬಂಜಾರಾ ಮತ್ತು ಗದಾರಿಯಾ ಸಮುದಾಯದವರು ತಮಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣಾಲಯಗಳಲ್ಲಿ ಶೇ.5ರ ಮೀಸಲಾತಿಯನ್ನು ಕಲ್ಪಿಸಬೇಕೆಂದು ಆಗ್ರಹಿಸುತ್ತಿದಾರೆ. 

Advertisement

Udayavani is now on Telegram. Click here to join our channel and stay updated with the latest news.

Next