Advertisement

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

07:28 PM May 02, 2024 | Team Udayavani |

ಗಂಗೊಳ್ಳಿ: ತೋಟಕ್ಕೆ ಬಂದ ಬೀಡಾಡಿ ದನಗಳನ್ನು ಓಡಿಸಿಕೊಂಡು ಹೋಗುವ ವೇಳೆ ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದ ಗುಜ್ಜಾಡಿ ಗ್ರಾಮದ ನಿವಾಸಿ ನಾಗರಾಜ (38) ಅವರು ಉಸಿರುಗಟ್ಟಿ, ಸಾವನ್ನಪ್ಪಿದ ಘಟನೆ ಕೊಡಪಾಡಿಯಲ್ಲಿ ಮೇ 2ರಂದು ಸಂಭವಿಸಿದೆ.

Advertisement

ನಾಗರಾಜ ಅವರು ಮೇ 1 ರಾತ್ರಿ 9.30ರ ವೇಳೆಗೆ ಊಟ ಮಾಡಿ ಮನೆಯ ಸಿಟ್‌ಔಟ್‌ನಲ್ಲಿ ಮಲಗಿದ್ದು, ರಾತ್ರಿ 10ರ ವೇಳೆಗೆ ತೋಟಕ್ಕೆ ಬಂದ ಬೀಡಾಡಿ ದನಗಳನ್ನು ಓಡಿಸಿಕೊಂಡು ಹೋಗಿದ್ದಾರೆ. 11.30ರ ವೇಳೆಗೆ ಮನೆಯವರು ಹೊರಗೆ ಬಂದು ನೋಡಿದಾಗ ನಾಗರಾಜ ಅವರು ಇರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿತ್ತು. ನೆರೆಕರೆಯವರೊಂದಿಗೆ ಹುಡುಕಾಟ ನಡೆಸಿದಾಗ ಪತ್ತೆಯಾಗಿರಲಿಲ್ಲ. ಮೇ 2ರ ಬೆಳಗ್ಗೆ 8.30ರ ಸುಮಾರಿಗೆ ಕೊಡಪಾಡಿಯ ನಾರಾಯಣ ಅವರ ಜಾಗದಲ್ಲಿರುವ ಆವರಣವಿಲ್ಲದ ಬಾವಿಯಲ್ಲಿ ನಾಗರಾಜ ಅವರ ಮೃತದೇಹ ಪತ್ತೆಯಾಗಿದೆ. ದನಗಳನ್ನು ಓಡಿಸಿಕೊಂಡು ಬರುವಾಗ ಆವರಣವಿಲ್ಲದ ಬಾವಿಗೆ ಬಿದ್ದು, ಉಸಿರುಗಟ್ಟಿ, ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಪತ್ನಿ ಕವಿತಾ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next