Advertisement

ಗುಜರಾತ್‌ ಶಾಲೆ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು

10:34 AM Oct 15, 2019 | Team Udayavani |

ಅಹಮದಾಬಾದ್‌: “ಮಹಾತ್ಮಾಗಾಂಧಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು?’- ಹೀಗೆಂದು ಗುಜರಾತ್‌ನ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದೆ. ಇದರ ಜತೆಗೆ ಮದ್ಯಪಾನ ನಿಷೇಧ ಇರುವ ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಸಾಗಣೆಯ ಬಗ್ಗೆಯೂ ಪ್ರಶ್ನೆ ಕೇಳಲಾಗಿದೆ.

Advertisement

ಸುಫ‌ಲಾಂ ಶಾಲಾ ವಿಕಾಸ್‌ ಸಂಕುಲ್‌ ಸಂಸ್ಥೆಯ ಶಾಲೆಗಳ 9ನೇ ತರಗತಿಯ ಆಂತರಿಕ ಮೌಲ್ಯಮಾಪನಾ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಅವುಗಳನ್ನು ಮುದ್ರಿಸಲಾಗಿದೆ. ಇದರಿಂದ ಗುಜ ರಾತ್‌ ಶಿಕ್ಷಣ ಇಲಾಖೆ ಮುಜುಗರಕ್ಕೆ ಗುರಿಯಾಗಿದೆ ಮಾತ್ರವಲ್ಲದೆ ತನಿಖೆಗೆ ಕೂಡ ಆದೇಶ ನೀಡಿದೆ. ವಿದ್ಯಾರ್ಥಿಗಳಿಗೆ ಕೇಳಲಾಗಿರುವ ಪ್ರಶ್ನೆಗಳು ಅತ್ಯಂತ ಆಕ್ಷೇಪಾ ರ್ಹವಾಗಿವೆ. ಈ ಪ್ರಶ್ನೆಗಳು ಪತ್ರಿಕೆಯಲ್ಲಿ ಕಂಡುಬಂದಿರುವ ಕುರಿತು ನಾವು ತನಿಖೆಗೆ ಆದೇಶಿಸಿದ್ದೇವೆ ಎಂದು ಗಾಂಧಿನಗರದ ಜಿಲ್ಲಾ ಶಿಕ್ಷಣಾಧಿಕಾರಿ ಭರತ್‌ ವಾಧೆರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next