Advertisement

ಗುಜರಾತ್‌,ಮುಜಾಫ‌ರ್‌ನಗರ ಗಲಭೆ ನಡೆಸಿದವರಿಗೂ ಶಿಕ್ಷೆಯಾಗುತ್ತೆ:ಕೇಜ್ರಿ

02:36 PM Dec 18, 2018 | |

ಹೊಸದಿಲ್ಲಿ: 1984ರ ಸಿಕ್ಖ್ ವಿರೋಧಿ ಗಲಭೆ ಪ್ರಕರಣದಲ್ಲಿ  ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌ನನ್ನು ಅಪರಾಧಿ ಎಂದು  ಜೀವಾವಧಿ ಶಿಕ್ಷೆ ವಿಧಿಸಿರುವ  ದಿಲ್ಲಿ ಹೈಕೋರ್ಟ್‌ನ ತೀರ್ಪನ್ನು  ಆಪ್‌ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸ್ವಾಗತಿಸಿದ್ದು, ಗುಜರಾತ್‌ ಮತ್ತು ಮುಜಾಫ‌ರ್‌ನಗರ ಗಲಭೆ ನಡೆಸಿದವರಿಗೂ ಇದೇ ರೀತಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಕೋರ್ಟ್‌ ತೀರ್ಪನ್ನು ಸ್ವಾಗತಿಸಿ ಎಎನ್‌ಐನೊಂದಿಗೆ ಮಾತನಾಡಿದ ಕೇಜ್ರಿವಾಲ್‌ ಸಜ್ಜನ್‌ ಕುಮಾರ್‌ಗೆ ಶಿಕ್ಷೆಯಾಗಿದ್ದು, 34 ವರ್ಷಗಳ ಬಳಿಕ ಸಿಖ್‌ ಕುಟುಂಬಕ್ಕೆ ನ್ಯಾಯ ದೊರಕಿದೆ. ಈ ಪ್ರಕರಣದಲ್ಲಿರುವ ದೊಡ್ಡ ನಾಯಕರಿಗೂ ಶಿಕ್ಷೆಯಾಗುವ ವಿಶ್ವಾಸ ವ್ಯಕ್ತ ಪಡಿಸಿದರು. ಇದೇ ವೇಳೆ 2002 ರ ಗುಜರಾತ್‌ ಗಲಭೆ ಮತ್ತು 2013 ರ ಮುಜಾಫ‌ರ್‌ನಗರ ಗಲಭೆ ನಡೆಸಿದ ದುಷ್ಕರ್ಮಿಗಳಿಗೂ ಇದೇ ರೀತಿ ಶಿಕ್ಷೆಯಾಗಲಿದೆ ಎಂದು ಕೇಜ್ರಿವಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಕೋರ್ಟ್‌ ತೀರ್ಪು ಹೊರ ಹಾಕುತ್ತಿದ್ದಂತೆ ಟ್ವೀಟ್‌ ಮಾಡಿದ್ದ ಕೇಜ್ರಿವಾಲ್‌ ನಾನು ದೆಹಲಿ ಕೋರ್ಟ್‌ನ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಅಧಿಕಾರದಲ್ಲಿದ್ದವರಿಂದ ಹತ್ಯೆಗೀಡಾಗಿದ್ದ ಮುಗ್ಧ ಸಂತ್ರಸ್ತರ ಸುದೀರ್ಘ‌ ಕಾಯುವಿಕೆಯಾಗಿತ್ತು ಎಂದು ಬರೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next