Advertisement

ಗುಜರಾತ್‌ ಸಚಿವಾಲಯ ಹೊಕ್ಕ ಚಿರತೆ!

06:50 AM Nov 06, 2018 | Team Udayavani |

ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿನ ಸಚಿವಾಲಯಕ್ಕೆ ಸೋಮವಾರ ವಿಶೇಷ ಅತಿಥಿಯ ಆಗಮನವಾಗಿತ್ತು. ಆದರೆ ಈ ಅತಿಥಿಯನ್ನು ಹೊರಗೆ ಕಳುಹಿಸುವವರೆಗೂ ಸಚಿವಾಲಯ ದೊಳಕ್ಕೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡಿರಲಿಲ್ಲ!

Advertisement

ಮಧ್ಯರಾತ್ರಿ 2 ಗಂಟೆಗೆ ಚಿರತೆಯೊಂದು ಸಚಿವಾಲಯದ ಮುಂದಿನ ಗೇಟ್‌ನ ಕೆಳಗಿನಿಂದ ಒಳಗೆ ಪ್ರವೇಶಿಸಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಅದು ತಿಳಿಯುತ್ತಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಸಚಿವಾಲಯದ ಸಮೀಪದಲ್ಲೇ ಅರಣ್ಯ ಇದ್ದುದರಿಂದ, ಅಲ್ಲಿಂದಲೇ ಇದು ಪ್ರವೇಶಿಸಿರಬೇಕು ಎಂದು ಊಹಿಸಲಾಗಿದೆ.

ಸುಮಾರು 200 ಸಿಬಂದಿ ಸತತ 12 ತಾಸು ಕಾರ್ಯಾಚರಣೆ ನಡೆಸಿ ಸೋಮವಾರ ಮಧ್ಯಾಹ್ನ ಚಿರತೆಯನ್ನು ಬೋನಿಗೆ ಹಾಕಿದ್ದಾರೆ. ಚಿರತೆಯನ್ನು ಹಿಡಿಯುವವರೆಗೂ ಸಚಿವಾಲಯದೊಳಕ್ಕೆ ತೆರಳಲು ಯಾರಿಗೂ ಅವಕಾಶ ಮಾಡಿಕೊಡಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next