Advertisement

Gujarat:ಬಿರುಸಿನ ಮಳೆಗೆ 3 ಮಂದಿ ಸಾವು

01:39 AM Aug 27, 2024 | Team Udayavani |

ಅಹ್ಮದಾಬಾದ್‌: ಗುಜರಾತ್‌ನ ಹಲವು ಭಾಗಗಳಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಪ್ರವಾಹ ಮತ್ತು ಮಳೆ ಪ್ರಕೋಪಕ್ಕೆ ಮೂವರು ಅಸು ನೀಗಿದ್ದಾರೆ. ಅಹ್ಮದಾಬಾದ್‌, ಗಾಂಧಿ ನಗರದ ಪ್ರಮುಖ ಭಾಗಗಳಲ್ಲಿನ ರಸ್ತೆಗಳಿಗೆ ನೀರು ನುಗ್ಗಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ವಲ್ಸಾಡ್‌ ಮತ್ತು ನವಸಾರಿ ಜಿಲ್ಲೆಗಳಲ್ಲಿ ನೂರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

Advertisement

ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ 7 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿ ದ್ದಾರೆ. ಹಲವು ಸ್ಥಳಗಳಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದೇ ವೇಳೆ, ಗುಜರಾತ್‌ನ ಕಛ, ವಡೋದರಾ, ನವಸಾರಿ, ವಲ್ಸಾಡ್‌, ಅಮ್ರೇಲಿ ಮತ್ತು ಭಾವಾನಗರಗಳಲ್ಲಿ ಮಂಗಳವಾರದ ವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನೊಂದೆಡೆ, ಉತ್ತರಾಖಂಡ ದಲ್ಲಿ ಗೌರಿಕುಂಡದಿಂದ ಕೇದಾರನಾಥಕ್ಕೆ ಚಾರಣ ತೆರಳುವ ಮಾರ್ಗವನ್ನು ತೆರೆಯಲಾಗಿದೆ. 26 ದಿನಗಳಿಂದ ಮಳೆಯ ಕಾರಣದಿಂದ ಅದನ್ನು ಮುಚ್ಚಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next