Advertisement
ಇಲ್ಲಿನ ನಿವಾಸಿ ಸಾಧು ಮರಕಾಲ್ತಿಯವರ ಪುತ್ರ ಮಂಜುನಾಥ ಮರಕಾಲ ಅವರು ಗಿಲಾನ್ ಬರ್ರೆ ಸಿಂಡ್ರೋಮ್ ಎಂಬ ಕಾಯಿಲೆಗೆ ಈಡಾಗಿದ್ದಾರೆ. ಬಡವರಾದ ಮಂಜುನಾಥ ಅವರು ತಾಯಿಯ ನೆರವಿನಿಂದಲೇ ಶಿಕ್ಷಣ ಪಡೆದಿದ್ದು, ಬಳಿಕ ಬೆಂಗಳೂರಿನ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದ್ದರು. ಕೆಲವು ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೀಡಾಗಿದ್ದು, ನಾರಾಯಣ ಹೃದಯಾಲದ ವೈದ್ಯರು ಆತನಿಗೆ ಲಕ್ಷಕ್ಕೊಬ್ಬರಿಗೆ ಬರಬಹುದಾದ ಗಿಲಾನ್ ಬರ್ರೆ ಸಿಂಡ್ರೋಮ್ (ದೇಹದ ಜೀವ ನಿರೋಧಕ ವ್ಯವಸ್ಥೆ ನರಗಳ ಮೇಲೆ ದಾಳಿ ಮಾಡುವುದು) ಇದೆ ಎಂದು ತಿಳಿಸಿದರು. ಈ ಕಾಯಿಲೆಯಿಂದಾಗಿ ಮಂಜುನಾಥ್ ಅವರ ದೇಹ ಸಂಪೂರ್ಣ ಶಕ್ತಿ ಕಳೆದುಕೊಂಡಿದೆ.
Advertisement
“ಗಿಲಾನ್ ಬರ್ರೆ ಸಿಂಡ್ರೋಮ್’ಚಿಕಿತ್ಸೆಗೆ ನೆರವು ನೀಡಿ
06:00 AM May 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.