Advertisement

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

12:46 PM May 07, 2024 | Team Udayavani |

ಧಾರವಾಡ: ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಧಾರವಾಡದ ಗಾಂಧಿನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಬಂದಿದ್ದ ಮೇಲಿಮನಿ ಎಂಬುವವರು ಏಕಾಏಕಿ ತಲೆ ಸುತ್ತು ಬಂದು ಕುಸಿದು ಬಿದ್ದ ಪ್ರಸಂಗ ನಡೆದಿದೆ.

Advertisement

ಡಾ.ನಿತಿನ್‌ಚಂದ್ರ ಹತ್ತಿಕಾಳ ಅವರು ಅದೇ ಮತಗಟ್ಟೆಗೆ ಮತ ಚಲಾಯಿಸಲು ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಮೇಲಿನಮನಿ ಅವರು ತಲೆ ಸುತ್ತು ಬಂದು ಕುಸಿದು ಬಿದ್ದಿದ್ದನ್ನು ನೋಡಿ ಕೂಡಲೇ ಅವರ ನೆರವಿಗೆ ಧಾವಿಸಿದ ಡಾ.ನಿತಿನ್‌ಚಂದ್ರ ಅವರು ಮೇಲಿನಮನಿ ಅವರ ಬಿಪಿ, ಶುಗರ್ ಎಲ್ಲವನ್ನೂ ತಪಾಸಣೆ ನಡೆಸಿ, ಆರೈಕೆ ಮಾಡಿದ ನಂತರ ಅವರನ್ನು ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮೇಲಿನಮನಿ ಅವರ ಆರೈಕೆ ಮಾಡಿದ ನಂತರ ಡಾ.ಹತ್ತಿಕಾಳ ಅವರು ತಮ್ಮ ಹಕ್ಕು ಚಲಾಯಿಸಿದರು. ಇವರ ಈ ಕಾರ್ಯಕ್ಕೆ ಅಲ್ಲಿ ಸೇರಿದ್ದ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next