Advertisement

ಗೂಡೂರು-ಜೋಳದಡಗಿ ಬ್ರಿಜ್ ಕಂ ಬ್ಯಾರೇಜ್ ಮುಳುಗಡೆ

02:41 PM Oct 15, 2020 | keerthan |

ಯಾದಗಿರಿ: ಸನ್ನತ್ತಿ ಬ್ಯಾರೇಜ್ ನಿಂದ 2.80 ಲಕ್ಷ ಕ್ಯೂಸೆಕ್ ನೀರು ಭೀಮಾನದಿ ಪಾತ್ರಕ್ಕೆ ಹರಿಬಿಡಲಾಗಿದ್ದು ಇದರಿಂದ ಸೈದಾಪುರ ಬಳಿಯ ಗೂಡುರು ಮತ್ತು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ.

Advertisement

ಇದರಿಂದಾಗಿ ನದಿ ತಟದ ಗ್ರಾಮಗಳಾದ ಗೂಡೂರು, ಜೋಳದಡಗಿ, ಆನೂರು ಕೆ, ಗೊಂದಡಗಿ, ಭೀಮನಹಳ್ಳಿ, ಆನೂರು ಬಿ ಸೇರಿದಂತೆ ಇತರ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇನ್ನಷ್ಟು ನೀರಿನ ಹರಿವು ಹೆಚ್ಚಾದರೆ ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ.

ಇದನ್ನೂ ಓದಿ:ವಿಜಯಪುರದಲ್ಲಿ ಮುಂದುವರಿದ ಮಳೆಯಬ್ಬರ: ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ರೈತ

ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಸಾಕಷ್ಟು ಮಳೆಯಿಂದ ಕೆರೆ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದು ಆವಾಂತರ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next