Advertisement
ಆರಂಭದಲ್ಲಿ ಭಜನೆ ನಡೆಸುವ ಸ್ಥಳವಾಗಿ ಗುರುತಿಸಿಕೊಂಡಿದ್ದ ಈ ಸ್ಥಳ ಇದೀಗ ಶಾಶ್ವತ ದೇವಾಲಯವಾಗಿ ಮಾರ್ಪಟ್ಟು ಸಾಗರ ಪಟ್ಟಣದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.
Related Articles
Advertisement
1989ರ ಜುಲೈ ತಿಂಗಳಿನಲ್ಲಿ ಶೃಂಗೇರಿಯ ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೂತನ ದೇವಾಲಯದ ಲೋಕಾರ್ಪಣೆ ಮತ್ತು ಶಿಲಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ವೈಭವದಿಂದ ನಡೆಯಿತು. ಪ್ರತಿಷ್ಠಾಪನೆಗಿಂತ ಮೊದಲು ದೇವರ ಮೂರ್ತಿಯನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗಿತ್ತು.
ದೇವಾಲಯದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿ ಶನಿವಾರ ಸಂಜೆ ಭಜನೆ ನಡೆಸಲಾಗುತ್ತದೆ. ಚೈತ್ರ ಶುದ್ಧ ಪಾಡ್ಯದಿಂದ ನವಮಿ ವರೆಗೆ ಉತ್ಸವ ನಡೆಯುತ್ತದೆ. ನವಮಿಯಂದು ರಾಮ ದೇವರ ಉತ್ಸವ ಮೂರ್ತಿಯ ರಾಜಬೀದಿ ಉತ್ಸವ ನಡೆಯುತ್ತದೆ. ದಶಮಿಯಂದು ರಾಮತಾರಕ ಹೋಮ ವೈಭವದಿಂದ ನಡೆಯುತ್ತದೆ.
ಶ್ರಾವಣಮಾಸದಲ್ಲಿ ನಿತ್ಯ ಬೆಳಗ್ಗೆ ಅಭಿಷೇಕ ಪೂಜೆ ಮತ್ತು ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ.ದೀಪಾವಳಿ,ಯುಗಾದಿ,ಶಿವರಾತ್ರಿ ಮತ್ತಿತರ ಹಬ್ಬ ಹರಿದಿನಗಳಂದು ಗುಡಿಗಾರ ಸಮಾಜದ ಎಲ್ಲಾ ಕುಟುಂಬಸ್ಥರು ಮತ್ತು ಸಾಗರ ನಗರದ ವಿವಿಧ ಬೀದಿಯ ಭಕ್ತರು ಆಗಮಿಸಿ ಪೂಜೆ ಮತ್ತು ಹರಕೆ ಸಮರ್ಪಿಸುತ್ತಾರೆ. ಶತ್ರುಭಯ ನಿವರಣೆ, ಕೌಟುಂಬಿಕ ಶಾಂತಿ, ಉದ್ಯೋಗ ಪ್ರಾಪ್ತಿ, ಕಾರ್ಯದಲ್ಲಿ ಯಶಸ್ಸು ಇತ್ಯಾದಿಗಳನ್ನು ಪ್ರಾರ್ಥಿಸಿ ಭಕ್ತರು ಬಗೆ ಬಗೆಯ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ.
ಫೋಟೋ ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ