Advertisement

Gudibande: ಕಲ್ಯಾಣಿಯಲ್ಲಿ ಬಿದ್ದು ಯುವಕ ಸಾವು

05:21 PM Oct 23, 2024 | Team Udayavani |

ಗುಡಿಬಂಡೆ: ಪಟ್ಟಣದ ಬ್ರಾಹ್ಮಣರಹಳ್ಳಿಯ ರಸ್ತೆಯಲ್ಲಿರುವ ಬೆಳಗಿರಿ ರಂಗನಬಾವಿಯಲ್ಲಿ ಈಜಾಡಲು ಹೋಗಿ ಐ.ಟಿ.ಐ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಚರಣೆ ನಡೆಸಿದ ಘಟನೆ ಅ.23 ರ ಬುಧವಾರ ನಡೆದಿದೆ.

Advertisement

ಪಟ್ಟಣದ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿ, ಗೌರಿಬಿದನೂರು ತಾಲೂಕು, ಭಕ್ತರಹಳ್ಳಿ ಗ್ರಾಮದ ಮರಿಯಪ್ಪ ಅವರ ಮಗ ವೆಂಕಟಾಚಲಪತಿ (18) ಮೃತಪಟ್ಟ ವ್ಯಕ್ತಿ.

ವೆಂಕಟಾಚಲಪತಿ ಮತ್ತು ಇತರ 3 ಜನ ವಿದ್ಯಾರ್ಥಿಗಳು ಬಿಳಗಿರಿ ರಂಗನ ಬಾವಿಯಲ್ಲಿ ಈಜಾಡಲು ಹೋಗಿ ಮೃತಪಟ್ಟಿದ್ದು, ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳದ ಮತ್ತು ಗುಡಿಬಂಡೆ ಪೊಲೀಸ್ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next