Advertisement

Gudibande; ತಂಗಿಯ ಮಕ್ಕಳ ಕಿಡ್ನಾಪ್: ಗಂಡು ಮಗು ಹತ್ಯೆ ಮಾಡಿ ಹೂತು ಹಾಕಿದ ಮಹಿಳೆ!

05:23 PM Dec 01, 2023 | Team Udayavani |

ಗುಡಿಬಂಡೆ: ಮಹಿಳೆಯೊಬ್ಬಳು ತಂಗಿಯ ಮಕ್ಕಳನ್ನೇ ಕಿಡ್ನಾಪ್ ಮಾಡಿ ಗಂಡು ಮಗುವನ್ನು ಹತ್ಯೆಗೈದ ಬೆಚ್ಚಿ ಬೀಳುವ ಘಟನೆ ನಡೆದಿದೆ.

Advertisement

ಗುಡಿಬಂಡೆ ಪೊಲೀಸ್ ವೃತ್ತದ ಪೆರೇಸಂದ್ರ ಪೊಲೀಸ್ ಠಾಣೆಯ ವ್ಯಾಪ್ತಿಯ ಮುತ್ತಕದಹಳ್ಳಿ ಗ್ರಾಮದ ನಿವಾಸಿ ಅಂಬಿಕ ಎಂಬಾಕೆ ತನ್ನ ತಂಗಿಯ ಮಗನಾದ ಮಧುಕುಮಾರ್ (6) ಎಂಬಾತನನ್ನು ಕೊಲೆ ಮಾಡಿ, ಮಾವಿನ ತೋಟದಲ್ಲಿ ಹೂತು ಹಾಕಿ, ಮಗಳಾದ ಮನುಶ್ರೀಯನ್ನು ಕಿಡ್ನಾಪ್ ಮಾಡಿದ್ದಾಳೆ.

ಗುರುವಾರ ಅಂಬಿಕಾ ತನ್ನ ತಂಗಿಯಾದ ಅನಿತಾಳ ಇಬ್ಬರು ಮಕ್ಕಳಾದ ಗಂಡು ಮಗ ಮಧುಕುಮಾರ್, ಹೆಣ್ಣು ಮಗಳಾದ ಮನುಶ್ರೀಯನ್ನು ಮನೆಯಿಂದ ಕನಕ ದಾಸರ ಜಯಂತಿ ಹೋಗುವುದಾಗಿ ಹೊರಗಡೆ ಕರೆದುಕೊಂಡು ಬಂದು, ಗ್ರಾಮದ ಪಕ್ಕದ ಮಾವಿನ ತೋಟದಲ್ಲಿ ಮಧುಕುಮಾರ್ ರನ್ನು ಕೊಲೆ ಮಾಡಿ ಹೂತು ಹಾಕಿದ್ದು, ಹೆಣ್ಣು ಮಗಳಾದ ಮನುಶ್ರೀಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾಳೆ.

ಹೆಣ್ಣು ಮಗಳನ್ನು ಬೆಂಗಳೂರಿನ ಆಟೋದಲ್ಲಿ ಕರೆದುಕೊಂಡು ಹೋಗುವಾಗ ಆಕೆಯ ನಡುವಳಿಕೆ ಹಾಗೂ ಸಂಭಾಷಣೆಯ ಮೇಲೆ ಅಟೋ ಚಾಲಕನಿಗೆ ಅನುಮಾನ ಬಂದಿದ್ದು, ಅಟೋ ಚಾಲಕನ ಸಮಯ ಪ್ರಜ್ಞೆ ಮೆರೆದು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕೆರೆದುಕೊಂಡು ಹೋಗಿದ್ದು, ಪೊಲೀಸ್ ಸಿಬಂದಿಯವರು ಆಕೆಯನ್ನು ವಿಚಾರಣೆ ಮಾಡಿದಾಗ ನಡೆದ ವಿಚಾರವನ್ನು ಅಂಬಿಕಾ ಬಾಯಿ ಬಿಟ್ಟಿರುತ್ತಾಳೆ.

ತತ್ ಕ್ಷಣ ಬೆಂಗಳೂರಿನ ಪೊಲೀಸ್ ಸಿಬಂದಿ ಪೆರೇಸಂದ್ರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಅವರು ಆಕೆಯನ್ನು ಗ್ರಾಮಕ್ಕೆ ಕೆರೆತಂದು ವಿಚಾರಣೆ ಮಾಡಿದ ನಂತರ ಕೊಲೆ ಮತ್ತು ಕಿಡ್ನಾಪ್ ಬಗ್ಗೆ ಬಾಯಿ ಬಿಟ್ಟಿರುತ್ತಾಳೆ, ಗುರುವಾರ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತು.

Advertisement

ತಂಗಿಯ ಮೇಲಿನ ಕೋಪಕ್ಕೆ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದ್ದು, ಸ್ಥಳಕ್ಕೆ ಎಸ್.ಪಿ ನಾಗೇಶ್, ಡಿವೈಎಸ್.ಪಿ ಶಿವಕುಮಾರ್, ವೃತ್ತ ನಿರೀಕ್ಷಕ ನಯಾಜ್ ಬೇಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕ್ರೂರ ಕೃತ್ಯ ಎಸಗಲು ಮೂಲ ಕಾರಣ ಪೊಲೀಸರ ತನಿಖೆಯಿಂದಲೇ ಹೊರ ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next